Publish Date: Thu, 12 Oct 2023 (21:01 IST)
Updated Date: Thu, 12 Oct 2023 (21:03 IST)
ರಾಜ್ಯದಲ್ಲಿ ಭೀಕರ ಬರಗಾಲ ಇದೆ.ಬರಗಾಲ ಇದ್ದಾಗ ವಿದ್ಯುತ್ ಉತ್ಪಾದನೆ ಕಡಿಮೆ ಇರುತ್ತೆ.ಒಂದೆರಡು ಗಂಟೆ ವಿದ್ಯುತ್ ಸಮಸ್ಯೆ ಆಗುತ್ತೆ.10 ಸಾವಿರ ಎಕರೆಯಲ್ಲಿ ಸೋಲಾರ್ ಪ್ಲಾಂಟ್ ನಿರ್ಮಾಣಕ್ಕೆ ಪ್ಲಾನ್ ಇದ್ದು,ಈಗಾಗಲೇ ಇಂಧನ ಸಚಿವರು ಕೇಂದ್ರದ ಸಚಿವರನ್ನ ಭೇಟಿ ಮಾಡಿ ಮನವಿ ಮಾಡಿದ್ದಾರೆ.ಸೆಂಟ್ರಲ್ ಗ್ರಿಡ್ ನಿಂದ ಕೊಟ್ರೆ ನಮಗೆಲ್ಲಾ ಅನುಕೂಲ ಆಗುತ್ತೆ.ಮಳೆ ಬಿದ್ದಿದಿದ್ರೆ ಈ ಸಮಸ್ಯೆ ಆಗುತ್ತಿರಲಿಲ್ಲ.ಬಿಜೆಪಿಯವರು ಟೀಕೆ ಮಾಡ್ತಿದ್ದಾರೆ ಅಲ್ಲ.ಅವ್ರ ಕಾಲದಲ್ಲಿ ಎಷ್ಟು ಸಮಸ್ಯೆ ಆಗಿತ್ತು ಅಂತಾ ತಿಳಿಸಲಿ ಎಂದು ಬಿಜೆಪಿ ಗೆ ಡಿಸಿಎಂ ಡಿಕೆಶಿವಕುಮಾರ್ ಟಾಂಗ್ ನೀಡಿದ್ದಾರೆ.