Select Your Language

Notifications

webdunia
webdunia
webdunia
webdunia

ವೇಣುಗೋಪಾಲ ಸ್ವಾಮಿ ದೇಗುಲಕ್ಕೆ ನೋಟಿಸ್

ವೇಣುಗೋಪಾಲ ಸ್ವಾಮಿ ದೇಗುಲಕ್ಕೆ ನೋಟಿಸ್
bangalore , ಗುರುವಾರ, 21 ಏಪ್ರಿಲ್ 2022 (20:20 IST)
ರಾಜ್ಯದಲ್ಲಿ ಈಗಾಗಲೇ ಮಸೀದಿಗಳಲ್ಲಿ ಅಜಾನ್ ಕೂಗೋದಕ್ಕೆ ಬ್ರೇಕ್ ಹಾಕೋ ನಿಟ್ಟಿನಲ್ಲಿ ಹಲವು ಮಸೀದಿಗಳಿಗೆ ನೋಟಿಸ್ ಜಾರಿಗೊಳಿಸಲಾಗಿತ್ತು. ಇದೀಗ ಜನವಸತಿ ಪ್ರದೇಶದಲ್ಲಿ ಪೂಜೆ ವೇಳೆ ಜಾಸ್ತಿ ಸೌಂಡ್ ಮಾಡಿದ್ದಕ್ಕಾಗಿ ಪೊಲೀಸರು ದೇಗುಲಕ್ಕೂ ನೋಟಿಸ್ ಜಾರಿಗೊಳಿಸಿದ್ದಾರೆ. ಈ ಬಗ್ಗೆ ಮಲ್ಲೇಶ್ವರಂ ಪೊಲೀಸ್ ಠಾಣೆಗೆ ಜನರು ಮೌಖಿಕವಾಗಿ ದೂರು ನೀಡಿದ್ದರಿಂದಾಗಿ ಠಾಣಾ ವ್ಯಾಪ್ತಿಯಲ್ಲಿನ ವೇಣುಗೋಪಾಲಸ್ವಾಮಿ ದೇಗುಲಕ್ಕೆ ನೋಟಿಸ್ ಜಾರಿಗೊಳಿಸಲಾಗಿದೆ. ನೋಟಿಸ್​​​ನಲ್ಲಿ, ಪೂಜೆ ವೇಳೆ ಜೋರಾದ ಶಬ್ದದಿಂದ ಜನರಿಗೆ ತೊಂದರೆಯಾಗುತ್ತಿದೆ. ಪೂಜೆ ಸಂದರ್ಭದಲ್ಲಿ ಜನವಸತಿ ಪ್ರದೇಶದಲ್ಲಿ ಲೌಡ್ ಸೌಂಡ್ ಕಾರಣಕ್ಕೆ ಮಕ್ಕಳು, ಹಿರಿಯ ನಾಗರೀಕರಿಗೆ ಕಿರಿಕಿರಿ ಉಂಟಾಗುತ್ತಿದೆ. ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ಇಓ ಅರವಿಂದ ಬಾಬುಗೆ ನೋಟಿಸ್ ಜಾರಿಗೊಳಿಸಲಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಪುಟಿನ್ ಜೊತೆ ಮಾತುಕತೆಗೆ ಬ್ರಿಟನ್ ಪ್ರಧಾನಿ ನಕಾರ