Select Your Language

Notifications

webdunia
webdunia
webdunia
webdunia

ಕ್ಯಾಸಿನೋಗೆ ಜಮೀರ್ ಮಾತ್ರವಲ್ಲ, ಇಡೀ ಟೀಂ ಹೋಗುತ್ತೆ- ಜೆಡಿಎಸ್ ಶಾಸಕ ಸುರೇಶ್ ಗೌಡ

ಕ್ಯಾಸಿನೋಗೆ ಜಮೀರ್ ಮಾತ್ರವಲ್ಲ, ಇಡೀ ಟೀಂ ಹೋಗುತ್ತೆ- ಜೆಡಿಎಸ್ ಶಾಸಕ ಸುರೇಶ್ ಗೌಡ
ಬೆಂಗಳೂರು , ಬುಧವಾರ, 16 ಸೆಪ್ಟಂಬರ್ 2020 (11:17 IST)
ಬೆಂಗಳೂರು : ಕ್ಯಾಸಿನೋಗೆ ಜಮೀರ್ ಮಾತ್ರವಲ್ಲ, ಇಡೀ ಟೀಂ ಹೋಗುತ್ತೆ. ಪಾಸ್ ಪೋರ್ಟ್ ಗಳನ್ನು ತೆಗೆದು ನೋಡಿದ್ರೆ ಎಲ್ಲಾ ತಿಳಿಯುತ್ತೆ ಎಂದು ಜೆಡಿಎಸ್ ಶಾಸಕ ಸುರೇಶ್ ಗೌಡ ಹೇಳಿದ್ದಾರೆ.

ನಾಗಮಂಗಲದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು,  ಕರ್ನಾಟಕದ ಹಣವೆಲ್ಲಾ ಶ್ರೀಲಂಕಾ ಕ್ಯಾಸಿನೋಗೆ ಹೋಗ್ತಿದೆ. ಕರ್ನಾಟಕದಲ್ಲಿ ಯಾರ್ಯಾರು ಹೆಚ್ಚು ಹಣವನ್ನು ಗಳಿಸಿದ್ದಾರೋ. ಅವರು ಗಳಿಸಿದ ಹಣವನ್ನು ಕ್ಯಾಸಿನೋದಲ್ಲಿ ಕಳೆಯುತ್ತಿದ್ದಾರೆ. ಹೀಗಾಗಿ ಕರ್ನಾಟಕದಲ್ಲಿ ಕ್ಯಾಸಿನೋ ಓಪನ್ ಮಾಡಬೇಕು. ಹಣವೊಂದಿದ್ದರೆ ಎಲ್ಲಾ ವಸ್ತುಗಳು ಕ್ಯಾಸಿನೋದಲ್ಲಿ ಸಿಗುತ್ತದೆ. ನಮ್ಮ ಹಣ ನಮ್ಮಲ್ಲೇ ಇರಲಿ ಎಂದು ಸಲಹೆ ಕೊಡುತ್ತೇನೆ ಮತ್ತು ಸರ್ಕಾರಕ್ಕೆ ಸಲಹೆ ನೀಡಲು ನಿರ್ಧರಿಸಿದ್ದೇನೆ ಎಂದು ಹೇಳಿದ್ದಾರೆ.

ರಾಜಕಾರಣಿಗಳು ಡ್ರಗ್ಸ್ ತೆಗೆದುಕೊಳ್ಳುವ ಬಗ್ಗೆ ಗೊತ್ತಿಲ್ಲ. ರಾಜ್ಯ ಸರ್ಕಾರ ತನ್ನ ತಪ್ಪುಗಳನ್ನು ಮುಚ್ಚಿಕೊಳ್ಳುವುದಕ್ಕೆ ಕೆಜಿ ಹಳ್ಳಿ, ಡಿಜೆ ಹಳ್ಳಿ ಗಲಭೆ ಪ್ರಕರಣ ಮುಂದಿಟ್ಟಿದ್ದರು. ಅದು ಮುಗಿದ ಬಳಿಕ ಡ್ರಗ್ಸ್ ವಿಚಾರವನ್ನು ಶುರು ಮಾಡಿದ್ದಾರೆ. ಇವೆಲ್ಲವೂ ಸರ್ಕಾರದ ಪ್ರಾಯೋಜಿತ ಕಾರ್ಯಕ್ರಮಗಳು  ಎಂದು ಅವರು ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಪೆಡ್ಲರ್ ಗಳ ಜತೆ ಗುರುತಿಸಿಕೊಂಡಿರುವವರಿಗೆ ಸಮನ್ಸ್ ಕೊಡಲಿ- ಡಿ.ಕೆ.ಶಿವಕುಮಾರ್