Webdunia - Bharat's app for daily news and videos

Install App

ನಿಖಿಲ್ ಕುಮಾರಸ್ವಾಮಿ ಗೆದ್ದೇ ಗೆಲ್ತಾರಂತೆ!

Webdunia
ಬುಧವಾರ, 8 ಮೇ 2019 (20:05 IST)
ಹೈವೋಲ್ಟೇಜ್ ಕದನಕಣವಾಗಿದ್ದ ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ಮೈತ್ರಿ ಕೂಟದ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಗೆದ್ದೇ ಗೆಲ್ತಾರೆ.

ನಿಖಿಲ್ ಗೆಲ್ತಾರೆ ಅಂತ ಜೆಡಿಎಸ್ ಶಾಸಕ ಡಾ.ಅನ್ನದಾನಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಮಂಡ್ಯದ ಮಳವಳ್ಳಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವ್ರು, ಅಂಬರೀಷ್  ಮೃತಪಟ್ಟಿದ್ದಾರೆ. ಸುಮಲತಾ ಮೇಲೆ ಅನುಕಂಪ ಇದೆ ಅಂತಾರೆ. ನಮಗೆ ಅನುಕಂಪಕ್ಕಿಂತ ಅಭಿವೃದ್ಧಿ ಮುಖ್ಯ. ಒಬ್ಬ ಪಕ್ಷೇತರ ಸಂಸದೆ ಗೆಲ್ಲೋದ್ರಿಂದ ಅಭಿವೃದ್ಧಿ ಏನೂ ಆಗಲ್ಲ.

ಸುಮಲತಾಗೆ ಅನುಕಂಪ ಇದೆ ಅಂತ ಪ್ರಧಾನಿ ಆದವ್ರು ಐದು ಕೋಟಿ ಹೆಚ್ಚುವರಿ ಅನುದಾನವನ್ನ ಕೊಡಲ್ಲ. ಸಾಮಾನ್ಯ ಸಂಸದನಿಗೂ ಒಂದೇ ಅನುದಾನ. ಅನುಕಂಪದಿಂದ ಗೆದ್ದವ್ರಿಗೂ ಒಂದೇ ಅನುದಾನ ಎಂದು ಸುಮಲತಾಗೆ ಟಾಂಗ್ ಕೊಟ್ರು.

ನಿಖಿಲ್ ಗೆದ್ರೆ ಅವ್ರಪ್ಪ ಸಿಎಂ ಆಗಿದ್ದು, ಹೆಚ್ಚಿನ ಅನುದಾನ ತರ್ತಾರೆ ಎಂದ್ರು. ನನ್ನ ಕ್ಷೇತ್ರದಲ್ಲಿ ನನ್ ಎದುರಾಳಿ ಆಗಿದ್ದವ್ರು ಮೈತ್ರಿ ಧರ್ಮ ಪಾಲಿಸಿಲ್ಲ. ನಿಖಿಲ್ ಗೆದ್ರೆ ರಾಹುಲ್ ಗಾಂಧಿ ಪ್ರಧಾನಿ ಆಗೋಕೆ ಸಹಾಯ ಆಗುತ್ತದೆ. ಮಂಡ್ಯದಲ್ಲಿ ಕಾಂಗ್ರೆಸ್ಸಿಗರು ರಾಹುಲ್ ಗಾಂಧಿ ವಿರುದ್ಧ ಮತ ಹಾಕಿದ್ದಾರೆ. ಈ ಬಗ್ಗೆ ನಾನು ಸಿಎಂ ಕುಮಾರಸ್ವಾಮಿ, ದೇವೇಗೌಡ ಹಾಗೂ ಕಾಂಗ್ರೆಸ್ ನ ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ಗಮನಕ್ಕೆ ತಂದಿದ್ದೇನೆ ಎಂದ್ರು.

ಸಂಬಂಧಿಸಿದ ಸುದ್ದಿ

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments