Select Your Language

Notifications

webdunia
webdunia
webdunia
webdunia

ನೈಟ್​ ಕರ್ಫ್ಯೂ ತೆರವು-ನಿಷೇಧಾಜ್ಞೆ ಮುಂದುವರಿಕೆ

ನೈಟ್​ ಕರ್ಫ್ಯೂ ತೆರವು-ನಿಷೇಧಾಜ್ಞೆ ಮುಂದುವರಿಕೆ
ದಕ್ಷಿಣ ಕನ್ನಡ , ಸೋಮವಾರ, 8 ಆಗಸ್ಟ್ 2022 (19:56 IST)
ಬಿಜೆಪಿ ಕಾರ್ಯಕರ್ತ ಪ್ರವೀಣ್​​​ ನೆಟ್ಟಾರು ಹತ್ಯೆ ಬಳಿಕ ದಕ್ಷಿಣ ಕನ್ನಡ ಜಿಲ್ಲೆ ಉದ್ವಿಗ್ನಗೊಂಡಿತ್ತು.. ಹಂತ ಹಂತವಾಗಿ ಕರಾವಳಿ ಸಹಜ ಸ್ಥಿತಿಯತ್ತ ಮರಳುತ್ತಿದೆ. ಮುಂಜಾಗ್ರತೆಯಿಂದ ಸೆಕ್ಷನ್​​ 144 ಸೇರಿದಂತೆ ನೈಟ್​​​ ಕರ್ಫೂವನ್ನು ಹೇರಲಾಗಿತ್ತು. ಇದೀಗ ಪ್ರವೀಣ್​​​ ನೆಟ್ಟಾರು  ಹತ್ಯೆಗೈದ ಕೊಲೆ ಆರೋಪಿಗಳನ್ನು ಬಂಧಿಸಲಾಗಿದ್ದು, ಮಂಗಳೂರು ಸಹಜ ಸ್ಥಿತಿಗೆ ಮರಳುತ್ತಿದೆ. ಅದ್ರಿಂದಾಗಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನೈಟ್​ ಕರ್ಫ್ಯೂ ತೆರವು ಮಾಡಲಾಗಿದೆ. ಇಂದಿನಿಂದಲೇ ಆದೇಶ ಜಾರಿಗೆ ಬರುವಂತೆ ಜಿಲ್ಲಾಧಿಕಾರಿ ರಾಜೇಂದ್ರ ಸೂಚನೆ ನೀಡಿದ್ದಾರೆ. ಆದರೆ ಜಿಲ್ಲೆಯಲ್ಲಿ ಆಗಸ್ಟ್​ 14ರವರೆಗೆ ಸೆಕ್ಷನ್ 144​​​ ಮುಂದುವರಿಸೋದಾಗಿ ತಿಳಿಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಪ್ರವೀಣ್​ ಹತ್ಯೆ ಕೇಸ್​ ನಲ್ಲಿ ಮತ್ತಿಬ್ಬರ ಬಂಧನ