Select Your Language

Notifications

webdunia
webdunia
webdunia
webdunia

ಪ್ರವೀಣ್​ ಹತ್ಯೆ ಕೇಸ್​ ನಲ್ಲಿ ಮತ್ತಿಬ್ಬರ ಬಂಧನ

ಪ್ರವೀಣ್​ ಹತ್ಯೆ ಕೇಸ್​  ನಲ್ಲಿ ಮತ್ತಿಬ್ಬರ ಬಂಧನ
mangalore , ಸೋಮವಾರ, 8 ಆಗಸ್ಟ್ 2022 (19:50 IST)
ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಿನ್ನೆ ಮತ್ತಿಬ್ಬರನ್ನ ಬಂಧನ  ಮಾಡಲಾಗಿದೆ. ಪೊಲೀಸರು ಬಂಧಿತರನ್ನ ವಿಚಾರ‌ಣೆ ನಡೆಸುತ್ತಿದ್ದಾರೆ. ಅಬೀದ್, ನೌಫಾಲ್ ಬಂಧಿತ ಆರೋಪಿಗಳಾಗಿದ್ದಾರೆ. ಅಬಿದ್​ ನಾವೂರು ನಿವಾಸಿಯಾಗಿದ್ದು ಯಾಕೂಬ್​ರ ಮಗ. ಇನ್ನು,  ನೌಫಾಲ್ ಬೆಳ್ಳಾರೆಯ ಗೌರಿಹೊಳೆ ನಿವಾಸಿ ಮೊಹಮ್ಮದ್ ಮಗನಾಗಿದ್ದಾನೆ. ಹಂತಕರು ಕೊಲೆ ಮಾಡಲು ಅಬೀದ್ ಬಳಿ ಇದ್ದ ಕೇರಳ ರಿಜಿಸ್ಟ್ರೇಷನ್​ ಬೈಕ್​ನ್ನು ಬಳಸಿದ್ದಾರೆ. ಅದೇ ಬೈಕ್​​ನಲ್ಲಿ ಬಂದು ಕೊಲೆ ಮಾಡಿ ಮೂವರು ಹಂತಕರು ಹೋಗಿದ್ದಾರೆ.

ಅಬೀದ್​​ಗೆ ಹಂತಕರ ಜೊತೆ ನೇರಾನೇರ ಸಂಪರ್ಕ ಇತ್ತು ಎನ್ನಲಾಗುತ್ತಿದೆ. ನೌಫಾಲ್​ಗೂ ಕೂಡ ಹಂತಕರ ಜೊತೆ ನೇರಾನೇರ ಸಂಪರ್ಕವಿತ್ತು. ಹಂತಕರಿಗೆ ಪ್ರವೀಣ್ ಅಂಗಡಿ ಬಗ್ಗೆ ನೌಫಾಲ್ ಮಾಹಿತಿ ನೀಡಿದ್ದ. ಅಂಗಡಿ ಬಳಿ ಬಂದು ಪ್ರವೀಣ್ ಇದ್ದಾನಾ ಇಲ್ವಾ ಅಂತಾ ನೌಫಾಲ್ ಮಾಹಿತಿ ಕೊಡೋ ಕೆಲಸ ಮಾಡಿದ್ದಾನೆ ಎಂದು ಆರೋಪಿಸಲಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಸಿದ್ದು ವಿರುದ್ಧ ಹೆಚ್​​​ಡಿ ಕುಮಾರಸ್ವಾಮಿ ವ್ಯಂಗ್ಯ