Webdunia - Bharat's app for daily news and videos

Install App

ಫಯಾಜ್ ಜೊತೆಗಿನ ನೇಹಾ ಖಾಸಗಿ ಫೋಟೋಗಳ ಬಗ್ಗೆ ಕುಟುಂಬದವರ ಬೇಸರ

Krishnaveni K
ಭಾನುವಾರ, 21 ಏಪ್ರಿಲ್ 2024 (12:06 IST)
ಹುಬ್ಬಳ್ಳಿ: ಒಂದೆಡೆ ಹೆತ್ತ ಮಗಳು ಪಾಪಿ ಫಯಾಜ್ ಕೈಯಲ್ಲಿ ಜೀವ ಕಳೆದುಕೊಂಡ ಸಂಕಟ. ಇನ್ನೊಂದೆಡೆ ಸೋಷಿಯಲ್ ಮೀಡಿಯಾಗಳಲ್ಲಿ ಹರಿದಾಡುತ್ತಿರುವ ಆಕೆಯ ಫೋಟೋಗಳು. ನೇಹಾ ಕುಟುಂಬಸ್ಥರಿಗೆ ಇದೆಲ್ಲಾ ಗಾಯದ ಮೇಲೆ ಬರೆ ಎಳೆದಂತಾಗಿದೆ.

ಹುಬ್ಬಳ್ಳಿಯ ಕಾರ್ಪೋರೇಟರ್ ನಿರಂಜನ್ ಹೀರೇಮಠ್ ಮಗಳು ನೇಹಾ ಹೀರೇಮಠ್ ತಾನು ಓದುತ್ತಿದ್ದ ಕಾಲೇಜಿನಲ್ಲೇ ಫಯಾಜ್ ಎಂಬಾತ ಚಾಕುವಿನಿಂದ ಇರಿದ ಪರಿಣಾಮ ಸಾವಿಗೀಡಾಗಿದ್ದಳು. ಆಕೆಯ ಸಾವಿನ ಬಗ್ಗೆ ರಾಜ್ಯದಾದ್ಯಂತ ಭಾರೀ ಆಕ್ರೋಶವಿದೆ. ತನ್ನನ್ನು ಮದುವೆಯಾಗಲು ಒಪ್ಪಲಿಲ್ಲವೆಂದು ನೇಹಾಳನ್ನು ಹತ್ಯೆ ಮಾಡಿದ ಫಯಾಜ್ ನನ್ನು ಸಾರ್ವಜನಿಕವಾಗಿ ಗಲ್ಲಿಗೇರಿಸಬೇಕು ಎಂದು ಜನ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಆದರೆ ಈ ನಡುವೆ ಕೆಲವು ಮಾಧ್ಯಮಗಳು, ಸೋಷಿಯಲ್ ಮೀಡಿಯಾಗಳಲ್ಲಿ ಆಕೆ ಮತ್ತು ಫಯಾಜ್ ಜೊತೆಗಿರುವ ಫೋಟೋಗಳು ಹರಿದಾಡಿವೆ. ನೇಹಾ ಕೂಡಾ ಆತನನ್ನು ಮೊದಲು ಪ್ರೀತಿಸುತ್ತಿದ್ದಳು, ನಂತರ ದೂರವಾಗಿದ್ದಳು ಎಂದು ವರದಿಯಾಗುತ್ತಿದೆ. ಇದು ನೇಹಾ ಕುಟುಂಬಸ್ಥರಿಗೆ ಮತ್ತಷ್ಟು ಬೇಸರ ತಂದಿದೆ.

ಆಕೆ ಯಾವತ್ತೂ ಆತನನ್ನು ಪ್ರೀತಿಸುತ್ತಿರಲಿಲ್ಲ. ನೇಹಾ ಏನೇ ಇದ್ದರೂ ನಮ್ಮ ಬಳಿ ಹೇಳುತ್ತಿದ್ದಳು. ಫಯಾಜ್ ಪೀಡಿಸುತ್ತಿದ್ದ ವಿಚಾರವನ್ನೂ ಹೇಳಿದ್ದಳು. ನಾವು ಅವನಿಗೆ ಎಚ್ಚರಿಕೆಯನ್ನೂ ಕೊಟ್ಟಿದ್ದೆವು ಎಂದು ನೇಹಾ ತಂದೆ ಹೇಳಿದ್ದಾರೆ. ಇತ್ತ ನೇಹಾ ತಾಯಿ, ನನ್ನ ಮಗಳು ಆತನೊಂದಿಗೆ ಇರಲೇ ಇಲ್ಲ. ಆ ಫೋಟೋಗಳೆಲ್ಲಾ ಯಾರೋ ಬೇಕೆಂದೇ ಎಡಿಟ್ ಮಾಡಿ ಹಾಕುತ್ತಿದ್ದಾರೆ. ಈಗೆಲ್ಲಾ ಟೆಕ್ನಾಲಜಿಯಲ್ಲಿ ಯಾರು ಯಾರೋ ಜೊತೆಗಿರುವಂತೆ ಮಾಡಬಹುದಲ್ವಾ? ಅದೇ ರೀತಿ ಮಾಡಿದ್ದಾರಷ್ಟೇ. ನಮ್ಮ ಮಗಳು ಅಂತಾಕಿ ಅಲ್ಲ ಎಂದಿದ್ದರು.

ಆ ಫೋಟೋಗಳು ನಕಲಿಯೋ, ಅಸಲಿಯೋ ಏನೇ ಇರಲಿ, ಆದರೆ ಇಂದು ಆಕೆ ಧಾರುಣವಾಗಿ ಸಾವನ್ನಪ್ಪಿದ್ದ ಪರಿಸ್ಥಿತಿಯಲ್ಲಿ ಕೆಲವರು ಪ್ರಬುದ್ಧತೆ ಮರೆತು ಅಂತಹ ಫೋಟೋಗಳನ್ನು ಪ್ರಕಟಿಸುವ ಮೂಲಕ ಆಕೆಯ ಕುಟುಂಬಕ್ಕೆ ಮತ್ತಷ್ಟು ನೋವು ಕೊಡುತ್ತಿರುವುದಂತೂ ಸತ್ಯ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಅನರ್ಹ ಬಿಪಿಎಲ್‌ ಕಾರ್ಡ್‌ದಾರರಿಗೆ ಬಿಗ್ ಶಾಕ್ ಕೊಟ್ಟ ಸಿಎಂ ಸಿದ್ದರಾಮಯ್ಯ

ಭುಗಿಲೆದ್ದ ಹಿಂಸಚಾರ, ನೇಪಾಳಕ್ಕೆ ಹೋಗಲು ಸಿದ್ದ ಎಂದ ಸಂತೋಷ್ ಲಾಡ್, ಕಾರಣ ಏನ್ ಗೊತ್ತಾ

ಪ್ರತಿಭಟನೆಗಳಲ್ಲಿ ಬಿಜೆಪಿ ನಾಯಕರ ಮಕ್ಕಳು ಯಾಕೆ ಪಾಲ್ಗೊಳ್ಳಲ್ಲ: ಪ್ರಿಯಾಂಕ್ ಖರ್ಗೆ ಪ್ರಶ್ನೆ

ಬುರುಡೆ ಮೂಲ ಕೆದಕಿದ ಎಸ್‌ಐಟಿ ಅಧಿಕಾರಿಗಳು, ವಿಠಲ್ ಗೌಡನನ್ನು ಇಂದು ಕರೆದೊಯ್ದದ್ದು ಎಲ್ಲಿಗೆ

ಪೊಲೀಸ್ ಪೇದೆಯ ಬರ್ತಡೇ ಪಾರ್ಟಿಯಲ್ಲಿ ಡಾನ್ಸರ್‌ನ್ನು ತಬ್ಬಿ ಕುಣಿದಾಡಿದ ಎಎಸ್‌ಐ, ವೈರಲ್ ವಿಡಿಯೋ

ಮುಂದಿನ ಸುದ್ದಿ
Show comments