Webdunia - Bharat's app for daily news and videos

Install App

ನಂಜನಗೂಡಿನಲ್ಲಿ ಹರಕೆಗಾಗಿ ಬಿಟ್ಟಿದ್ದ ಕರುವಿನ ಮೇಲೆ ದಾಳಿ: ಮೂಕ ಪಶುವಿನ ಮೇಲೆ ಮತ್ತೊಂದು ಕ್ರೌರ್ಯ

Krishnaveni K
ಗುರುವಾರ, 16 ಜನವರಿ 2025 (16:23 IST)
ನಂಜನಗೂಡು: ಚಾಮರಾಜಪೇಟೆಯಲ್ಲಿ ಪಶುಗಳ ಮೇಲೆ ಕ್ರೌರ್ಯ ಮೆರೆದ ಬೆನ್ನಲ್ಲೇ ಈಗ ನಂಜುಂಡೇಶ್ವರನ ಸನ್ನಿಧಾನದಲ್ಲೇ ಕರುಗಳ ಮೇಲೆ ಪೈಶಾಚಿಕ ಕೃತ್ಯ ನಡೆದ ಘಟನೆ ಬೆಳಕಿಗೆ ಬಂದಿದೆ.

ನಂಜನಗೂಡಿನಲ್ಲಿ ಹರಕೆಗಾಗಿ ಬಿಟ್ಟಿದ್ದ ಕರುಗಳ ಮೇಲೆ ದುಷ್ಕರ್ಮಿಗಳು ಅಟ್ಟಹಾಸ ಮೆರೆದಿದ್ದಾರೆ. ಕರುಗಳ ಬಾಲ ಕತ್ತರಿಸಿ ಹಿಂಸೆ ನೀಡಿದ್ದಾರೆ. ಗಾಯಗೊಂಡ ಕರುಗಳನ್ನು ನೋಡಿದ ಸ್ಥಳೀಯರು ಪಶುವೈದ್ಯಕೀಯ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ನೀಡಿದ್ದಾರೆ.

ಆದರೆ ನಂಜುಂಡೇಶ್ವರ ಸನ್ನಿಧಾನದ ಜವಾಬ್ಧಾರಿಗೆ ಒಪ್ಪಿಸಿ ಹೋದ ಪಶುಗಳ ಬಗ್ಗೆ ದೇವಾಲಯದ ಆಡಳಿತ ಮಂಡಳಿ ಗಮನ ಹರಿಸಿಲ್ಲ ಎಂಬ ಆಕ್ರೋಶವೂ ಕೇಳಿಬಂದಿದೆ. ಈ ಕುಕೃತ್ಯ ನಡೆಸಿದವರು ಯಾರು ಎಂಬುದು ಇನ್ನೂ ಪತ್ತೆಯಾಗಿಲ್ಲ.

ಹರಕೆಗಾಗಿ ಬಿಟ್ಟಿದ್ದ ಕರು ಪರಶುರಾಮ ದೇಗುಲ ರಸ್ತೆಯಲ್ಲಿದ್ದಾಗ ಬೆಳಗ್ಗಿನ ಜಾವ ಯಾರೋ ಮಾರಕಾಸ್ತ್ರಗಳಿಂದ ಬಾಲ ತುಂಡರಿಸಿದ್ದಾರೆ. ಈ ಹಿಂದೆಯೂ ಹಲವು ಬಾರಿ ಕರುಗಳ ಮೇಲೆ ದಾಳಿಯಾಗಿದ್ದು ಇದೆ ಎಂದು ತಿಳಿದುಬಂದಿದೆ. ಈ ಘಟನೆ ನಡೆದ ಬಳಿಕ ಸ್ಥಳೀಯರಿಂದ ಆಕ್ರೋಶ ವ್ಯಕ್ತವಾಗಿದೆ. ಹರಕೆಗಾಗಿ ಬಿಡುವ ಕರುಗಳನ್ನು ಸಾಕಲು ಗೋಶಾಲೆ ಅಗತ್ಯವೆಂದು ಒತ್ತಾಯಿಸಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಪಶ್ಚಿಮ ಬಂಗಾಲದಲ್ಲಿ ಬಿಜೆಪಿ ಬಂದ ಮೇಲೆ ಬದಲಾವಣೆ ಶುರುವಾಗಿದೆ: ಅಮಿತ್ ಶಾ

ನೆಹರೂ ಕಾಂಗ್ರೆಸ್ ಹಗರಣದ ಪಿತಾಮಹ: ಶ್ರೀರಾಮುಲು

ವಿದ್ಯಾರ್ಥಿಗಳ ಮೇಲೆ ಪೆಲೆಟ್ ಗನ್ ಬಳಕೆ ಆರೋಪ: ಪಾರ್ಲಿಮೆಂಟ್ ಸ್ಟ್ರೀಟ್ ಪೊಲೀಸ್ ಠಾಣೆಗೆ ದೌಡಾಯಿಸಿದ ರಾಹುಲ್ ಗಾಂಧಿ

ಟೆಲಿಪ್ರಾಂಪ್ಟರ್ ಇಲ್ಲದೇ ವಂದೇ ಮಾತರಂ ಗೀತೆ ಹಾಡಲು ಮೋದಿ, ಅಮಿತ್‌ ಶಾಗೆ ಸವಾಲು ಹಾಕಿದ ಪ್ರಿಯಾಂಕ ಖರ್ಗೆ

Gold Price: ವರಮಹಾಲಕ್ಷ್ಮಿ ಹಬ್ಬದ ದಿನ ಚಿನ್ನ ಬಲು ದುಬಾರಿ

ಮುಂದಿನ ಸುದ್ದಿ
Show comments