ಮೈಸೂರ್ ಪಾಕ್ ಕೊಟ್ಟು ಲೈವ್ ನಲ್ಲಿ ಗುಡ್ ನ್ಯೂಸ್ ಹೇಳಿದ ಸಂಸದ ತೇಜಸ್ವಿ ಸೂರ್ಯ

Krishnaveni K
ಗುರುವಾರ, 16 ಜನವರಿ 2025 (14:49 IST)
ನವದೆಹಲಿ: ಬೆಂಗಳೂರು ದಕ್ಷಿಣ ಸಂಸದ ತೇಜಸ್ವಿ ಸೂರ್ಯ ವಿದೇಶಾಂಗ ಸಚಿವ ಜೈಶಂಕರ್ ಅವರಿಗೆ ಮೈಸೂರ್ ಪಾಕ್ ಕೊಟ್ಟು ಸಿಹಿ ಸುದ್ದಿಯೊಂದನ್ನು ಲೈವ್ ಅಲ್ಲಿ ಹಂಚಿಕೊಂಡಿದ್ದಾರೆ.

ಜನವರಿ 17 ರಿಂದ ಅಂದರೆ ನಾಳೆಯಿಂದ ಬೆಂಗಳೂರಿನಲ್ಲಿ ಅಮೆರಿಕಾ ಕಾನ್ಸಲ್ಯೂಟ್ ಆರಂಭವಾಗುತ್ತಿದೆ. ಇದಕ್ಕಾಗಿ ಬೆಂಗಳೂರಿಗರ ಪರವಾಗಿ ತೇಜಸ್ವಿ ಸೂರ್ಯ ಜೈಶಂಕರ್ ಪ್ರಸಾದ್ ಅವರಿಗೆ ಧನ್ಯವಾದ ಸಲ್ಲಿಸಿದ್ದಾರೆ.

ಇದಕ್ಕಾಗಿ ಅವರು ಬರಿಗೈಯಲ್ಲಿ ಹೋಗಿರಲಿಲ್ಲ. ಬೆಂಗಳೂರಿನಿಂದ ಕರ್ನಾಟಕ ಪ್ರಸಿದ್ಧ ಮೈಸೂರ್ ಪಾಕ್ ಸಿಹಿತಿಂಡಿಯನ್ನು ತೆಗೆದುಕೊಂಡು ಹೋಗಿದ್ದರು. ಜೈಶಂಕರ್ ಪ್ರಸಾದ್ ಅವರಿಗೆ ಮೈಸೂರ್ ಪಾಕ್ ಕೊಟ್ಟು ಈ ಇನ್ನು ಮುಂದೆ ಬೆಂಗಳೂರಿನಲ್ಲೂ ಅಮೆರಿಕಾ ಕಾನ್ಸಲ್ಯೂಟ್ ಕಚೇರಿ ಆರಂಭವಾಗಲಿದೆ ಎಂದು ಸಿಹಿ ಸುದ್ದಿ ನೀಡಿದ್ದಾರೆ.

ಇನ್ನು ತೇಜಸ್ವಿ ಸೂರ್ಯ ಬಳಿ ಮೈಸೂರ್ ಪಾಕ್ ಪಡೆದು ಧನ್ಯವಾದ ಸಲ್ಲಿಸಿದ ಜೈಶಂಕರ್ ಪ್ರಸಾದ್, ನನಗೂ ಬೆಂಗಳೂರಿನ ಮೇಲೆ ವಿಶೇಷ ಪ್ರೀತಿಯಿದೆ. ಬೆಂಗಳೂರಿಗರಿಗೆ ಅನುಕೂಲವಾಗುವ ದೃಷ್ಟಿಯಿಂದ ಈ ಪ್ರಯತ್ನ ಮಾಡಿದ್ದೇನೆ. ಈ ವಿಶೇಷ ಮೈಸೂರ್ ಪಾಕ್ ಗೆ ಧನ್ಯವಾದಗಳು ಎಂದಿದ್ದಾರೆ.

ಇನ್ನು ಮುಂದೆ ಅಮೆರಿಕಾ ವೀಸಾಕ್ಕಾಗಿ ಕರ್ನಾಟಕದ ಮಂದಿ ಚೆನ್ನೈ, ಹೈದರಾಬಾದ್ ಎಂದು ಬೇರೆ ರಾಜ್ಯಗಳ ಕಾನ್ಸಲ್ಯೂಟ್ ಕಚೇರಿಗೆ ಅಲೆಯಬೇಕಾಗಿಲ್ಲ. ಬೆಂಗಳೂರಿನಲ್ಲೇ ಅಮೆರಿಕಾ ವೀಸಾಕ್ಕಾಗಿ ಅರ್ಜಿ ಸಲ್ಲಿಸಿ ಪಡೆದುಕೊಳ್ಳಬಹುದು. ಇದು ಅಮೆರಿಕಾಗೆ ತೆರಳುವ ಅನೇಕರಿಗೆ ಅನುಕೂಲ ಮಾಡಿಕೊಟ್ಟಿದೆ.


 
 
 
 
 
 
 
 
 
 
 
 
 
 
 

A post shared by Tejasvi Surya (@tejasvisurya)

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಶುಭ್ಮನ್ ಗಿಲ್, ಹಾರ್ದಿಕ್ ಪಾಂಡ್ಯ ಆರೋಗ್ಯದ ಬಗ್ಗೆ ಬಿಗ್ ಅಪ್ಡೇಟ್ ಕೊಟ್ಟ ಸೂರ್ಯಕುಮಾರ್ ಯಾದವ್

ಇಂಡಿಗೋ ವಿಮಾನ ವ್ಯತ್ಯಯದಿಂದ ಕೋಟಿ ಕೋಟಿ ನಷ್ಟ, ಇದುವರೆಗೆ ಮರುಪಾವತಿಯಾದ ಮೊತ್ತವೆಷ್ಟು ಗೊತ್ತಾ

ದಿತ್ವಾ ಚಂಡಮಾರುತಕ್ಕೆ ತತ್ತರಿಸಿರುವ ಶ್ರೀಲಂಕಾದ ಕಡೆ ಹೊರಟ ಭಾರತದ ನಾಲ್ಕು ನೌಕಾಪಡೆ

ದೆಹಲಿ ಸ್ಫೋಟ ಪ್ರಕರಣ, ಎಲ್ಲ ಆರೋಪಿಗಳ ಎನ್‌ಐಎ ಕಸ್ಟಡಿ ವಿಸ್ತರಣೆ

ರಾಜ್ಯ ರಾಜಕಾರಣದಲ್ಲಿ ಕುತೂಹಲ ಮೂಡಿಸಿದ ಕೆಎನ್ ರಾಜಣ್ಣ ಹೇಳಿಕೆ

ಮುಂದಿನ ಸುದ್ದಿ
Show comments