Select Your Language

Notifications

webdunia
webdunia
webdunia
webdunia

ಗದಗಿನ ತೋಂಟದಾರ್ಯ ಶ್ರೀಗಳ ಲಿಂಗೈಕ್ಯಕ್ಕೆ ಮುರಾಘಾ ಶ್ರೀಗಳಿಂದ ಸಂತಾಪ

ಗದಗಿನ ತೋಂಟದಾರ್ಯ ಶ್ರೀಗಳ ಲಿಂಗೈಕ್ಯಕ್ಕೆ ಮುರಾಘಾ ಶ್ರೀಗಳಿಂದ ಸಂತಾಪ
ಚಿತ್ರದುರ್ಗ , ಶನಿವಾರ, 20 ಅಕ್ಟೋಬರ್ 2018 (16:06 IST)
ಗದಗಿನ ತೋಂಟದಾರ್ಯ ಶ್ರೀಗಳ ಲಿಂಗೈಕ್ಯರಾಗಿರುವುದಕ್ಕೆ ಚಿತ್ರದುರ್ಗ ಮುರುಘಾಮಠದ ಶ್ರೀ ಶಿವಮೂರ್ತಿ ಮುರುಘಾಶ್ರೀಗಳು ಸಂತಾಪ ಸೂಚಿಸಿದ್ದಾರೆ.

ಅನೇಕ ರೀತಿ ಬಸವತತ್ವ ಮತ್ತು ವಿಶ್ವತತ್ವವನ್ನ ಪ್ರಸಾರ ಮಾಡುವಲ್ಲಿ ಶ್ರಮಿಸಿದವರಲ್ಲಿ ತೋಂಟದಾರ್ಯ ಸಿದ್ದಲಿಂಗ ಶ್ರೀಗಳು ಒಬ್ಬರಾಗಿದ್ದಾರೆ.

ಬಸವತತ್ವ ,ಲಿಂಗಾಯತ ಧರ್ಮ, ಚಳುವಳಿಗಳನ್ನ ಮುಂದುವರಿಸುವಲ್ಲಿ ಶ್ರೀಗಳು ಮುಂದಾಗಿದ್ದರು.
ಇಂದು ಮುಂಜಾನೆ ಅವರು ಲಿಂಗೈಕ್ಯರಾಗಿರುವ ವಿಷಯ ಕೇಳಿ ಬಹುದೊಡ್ಡ ಆಘಾತವಾಗಿದೆ.

ತೋಂಟದಾರ್ಯ ಸ್ವಾಮೀಜಿಗಳ  ಲಿಂಗೈಕ್ಯದಿಂದ ಬಸವಧರ್ಮ, ಲಿಂಗಾಯತ ಧರ್ಮದ ಹೋರಾಟಕ್ಕೆ ದೊಡ್ಡ ಆಘಾತವಾಗಿದೆ ಎಂದಿದ್ದಾರೆ. ಅಗಲಿದ ಸ್ವಾಮೀಜಿಗಳ ಅಂತ್ಯಕ್ರಿಯೆಯಲ್ಲಿ ಭಾಗವಹಿಸುವುದಾಗಿ ಮುರುಘಾಮಠದಲ್ಲಿ ಶಿವಮೂರ್ತಿ ಸ್ವಾಮೀಜಿ ಹೇಳಿಕೆ ನೀಡಿದ್ದಾರೆ.




Share this Story:

Follow Webdunia kannada

ಮುಂದಿನ ಸುದ್ದಿ

ಪೊಲೀಸ್ ಠಾಣೆಗೆ ಬೆಂಕಿ ಹಚ್ಚುತ್ತೇನೆಂದು ಅವಾಜ್ ಹಾಕಿದ ಮಾಜಿ ಶಾಸಕ !