Select Your Language

Notifications

webdunia
webdunia
webdunia
webdunia

ಮಂಜೇಶ್ವರ ಶಾಸಕ ಪಿ.ಬಿ.ಅಬ್ದುಲ್ ರಝಾಕ್ ಇನ್ನಿಲ್ಲ

ಮಂಜೇಶ್ವರ ಶಾಸಕ ಪಿ.ಬಿ.ಅಬ್ದುಲ್ ರಝಾಕ್ ಇನ್ನಿಲ್ಲ
ಮಂಗಳೂರು , ಶನಿವಾರ, 20 ಅಕ್ಟೋಬರ್ 2018 (14:57 IST)
ಮಂಜೇಶ್ವರ ಶಾಸಕ ಪಿ.ಬಿ.ಅಬ್ದುಲ್ ರಝಾಕ್ ಅವರು ನಿಧನರಾಗಿದ್ದಾರೆ. ಜ್ವರದಿಂದ ಬಳಲುತ್ತಿದ್ದ ಶಾಸಕ  ಕಾಸರಗೋಡಿನ ಖಾಸಗಿ ಆಸ್ಪತ್ರೆಯಲ್ಲಿ ಇಹಲೋಕ ತ್ಯಜಿಸಿದ್ದಾರೆ.

ಎರಡು ಬಾರಿ ಮಂಜೇಶ್ವರ ಕ್ಷೇತ್ರದಿಂದ ಕೇರಳ ವಿಧಾನಸಭೆಗೆ ಪಿ.ಬಿ.ಅಬ್ದುಲ್ ರಝಾಕ್ ಆಯ್ಕೆಯಾಗಿದ್ದರು.
 2 ಬಾರಿ ಮುಸ್ಲಿಂ ಲೀಗ್ ಪಕ್ಷದಿಂದ ಸ್ಪರ್ಧಿಸಿ ಜಯಿಸಿದ್ದರು.

 2016 ರಲ್ಲಿ ನಡೆದ ಚುನಾವಣೆಯಲ್ಲಿ ಕೇವಲ 89 ಮತಗಳಿಗೆ ಬಿಜೆಪಿಯ ಕೆ. ಸುರೇಂದ್ರನ್ರನ್ನು ಸೋಲಿಸಿ ಗೆದ್ದಿದ್ದರು.
ಕೇರಳ ವಿಧಾನಸಭೆಯಲ್ಲಿ ಕನ್ನಡದಲ್ಲಿ ಪ್ರಮಾಣ ವಚನ ಸ್ವೀಕರಿಸಿ ಗಮನ ಸೆಳೆದಿದ್ದರು.




Share this Story:

Follow Webdunia kannada

ಮುಂದಿನ ಸುದ್ದಿ

ಮುಖವಸ್ತ್ರ ತೆಗಿ, ಇಲ್ಲಾಂದ್ರೆ ಕೆಲಸಕ್ಕೇ ಬರಬೇಡ ಎಂದು ಪಾಕ್ ಮಹಿಳೆಗೆ ಹುಕುಂ ಹೊರಡಿಸಿದ ಅಧಿಕಾರಿ