Select Your Language

Notifications

webdunia
webdunia
webdunia
webdunia

ಮನೆಗೆ ನುಗ್ಗಿ ರೌಡಿಶೀಟರ್‌ ಹತ್ಯೆ

ಮನೆಗೆ ನುಗ್ಗಿ ರೌಡಿಶೀಟರ್‌ ಹತ್ಯೆ

geetha

bangalore , ಬುಧವಾರ, 24 ಜನವರಿ 2024 (16:26 IST)
ಬೆಂಗಳೂರು :  ರೌಡಿಶೀಟರ್‌ ಒಬ್ಬನ ಮನೆಗೆ ನುಗ್ಗಿ ಆತನನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆಗೈದಿರುವ ಘಟನೆ ವಿವೇಕ್‌ ನಗರ ಕೊಳೆಗೇರಿ ಪ್ರದೇಶದಲ್ಲಿ ಮಂಗಳವಾರ ರಾತ್ರಿ ನಡೆದಿದೆ. ರೌಡಿ ಸತೀಶ್‌ ಅಲಿಯಾಸ್‌ ಮಿಲ್ಟ್ರಿ ಸತೀಶ್‌ ಕೊಲೆಯಾದ ವ್ಯಕ್ತಿ. 
 
ಮೃತ ಸತೀಶ್‌ ವಿರುದ್ದ ಹತ್ಯೆ ಪ್ರಯತ್ನ ಸೇರಿದಂತೆ ಹಲವು ಪ್ರಕರಣಗಳು ದಾಖಲಾಗಿದ್ದವು. ಹಳೆ ವೈಷಮ್ಯದ ಹಿನ್ನೆಲೆಯಲ್ಲಿ ಆತನನ್ನು ಕೊಲೆಗೈದಿರುವ ಶಂಕೆ ವ್ಯಕ್ತವಾಗಿದೆ.  

ಸ್ಥಳಕ್ಕೆ ಭೇಟಿ ನೀಡಿರುವ ವಿವೇಕ್‌ ನಗರ ಪೊಲೀಸರು ಶವವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿ ಆರೋಪಿಗಳ ಪತ್ತೆಗೆ ತನಿಖೆ ಕೈಗೊಂಡಿದ್ದಾರೆ. 
 

Share this Story:

Follow Webdunia kannada

ಮುಂದಿನ ಸುದ್ದಿ

ಯುವತಿಗೆ ಕೈ ಕೊಟ್ಟ ಪೊಲೀಸ್ ಪೇದೆ..!