Select Your Language

Notifications

webdunia
webdunia
webdunia
webdunia

ಮದ್ಯದ ಅಮಲಿನಲ್ಲಿ‌ ಸ್ನೇಹಿತನ ಕೊಲೆ

ಮದ್ಯದ ಅಮಲಿನಲ್ಲಿ‌ ಸ್ನೇಹಿತನ ಕೊಲೆ
bangalore , ಗುರುವಾರ, 8 ಡಿಸೆಂಬರ್ 2022 (21:51 IST)
ಮದ್ಯದ ಅಮಲಿನಲ್ಲಿ ಸ್ನೇಹಿತನನ್ನ ಕೊಲೆಗೈದಿದ್ದ ಆರೋಪಿಯನ್ನ ಪುಟ್ಟೇನಹಳ್ಳಿ ಠಾಣಾ ಪೊಲೀಸರು ಬಂಧಿಸಿದ್ದಾರೆ‌. ಅಭಿಜಿತ್ ಬಂಧಿತ ಆರೋಪಿ. ಡಿ.6ರ ರಾತ್ರಿ ಪುಟ್ಟೇನಹಳ್ಳಿ ಠಾಣಾ ವ್ಯಾಪ್ತಿಯ ಸಿದ್ಧಲಿಂಗೇಶ್ವರ ಥಿಯೇಟರ್ ಬಳಿ ಸ್ನೇಹಿತ ಬಸವರಾಜ್ (25) ಎಂಬಾತನನ್ನ ಕತ್ತು ಸೀಳಿ ಕೊಲೆಗೈದಿದ್ದ ಆರೋಪಿ ತಲೆಮರೆಸಿಕೊಂಡಿದ್ದ.
 
ಮೂಲತಃ ಕನಕಪುರದವನಾಗಿರುವ ಅಭಿಜಿತ್ 2 ವರ್ಷಗಳಿಂದ ಪ್ಲಂಬಿಂಗ್,ಪೇಂಟಿಂಗ್ ಕೆಲಸ ಮಾಡಿಕೊಂಡಿದ್ದ.ಗದಗ ಮೂಲದವನಾಗಿದ್ದ ಬಸವರಾಜ್ ಅಭಿಜಿತ್ ಜೊತೆಯಲ್ಲೇ ಕೆಲಸ ಮಾಡುತ್ತಿದ್ದ. ಅಭಿಜಿತ್ ಹಾಗೂ ಆತನ ಪತ್ನಿಗೆ ಅವಾಚ್ಯ ಪದ ಬಳಸಿ ನಿಂದಿಸುತ್ತಿದ್ದ ಬಸವರಾಜ್, ಘಟನಾ ದಿನವೂ ಕುಡಿದ ಮತ್ತಿನಲ್ಲಿ ಅಭಿಜಿತ್ ಪತ್ನಿಯ ಬಗ್ಗೆ ಕೆಟ್ಟದಾಗಿ ಮಾತನಾಡಿದ್ದ. ಇದರಿಂದ ಕೋಪಗೊಂಡ ಅಭಿಜಿತ್ ಮದ್ಯದ ಅಮಲಿನಲ್ಲಿ ಬಸವರಾಜ್ ನನ್ನ ಕೊಲೆಗೈದಿದ್ದಾಗಿ ವಿಚಾರಣೆ ವೇಳೆ ತಿಳಿದುಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಆಂಧ್ರದ ರೌಡಿಗೆ ಬೆಂಗಳೂರಿನಲ್ಲಿ ಮುಹೂರ್ತ..!