Webdunia - Bharat's app for daily news and videos

Install App

ಹೀಗೆ ಬಂದು ಹಾಗೆ ಹೋದ ಸಿದ್ದರಾಮಯ್ಯ: ಒಂದೂವರೆ ಗಂಟೆಯಲ್ಲೇ ಮುಡಾ ವಿಚಾರಣೆ ಫಿನಿಶ್

Krishnaveni K
ಬುಧವಾರ, 6 ನವೆಂಬರ್ 2024 (12:45 IST)
ಮೈಸೂರು: ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ಇಂದು ಮೈಸೂರಿನ ಲೋಕಾಯುಕ್ತ ಕಚೇರಿಯಲ್ಲಿ ವಿಚಾರಣೆಗೆಂದು ಹೀಗೆ ಬಂದು ಹೋದ ಸಿಎಂ ಸಿದ್ದರಾಮಯ್ಯ ಬಂದಷ್ಟೇ ವೇಗವಾಗಿ ತೆರಳಿದ್ದಾರೆ.
 

ಇಂದು ತಮ್ಮ ಸರ್ಕಾರೀ ವಾಹನ, ಬೆಂಗಾವಲು ಪಡೆ ಬಿಟ್ಟು ಖಾಸಗಿ ಕಾರಿನಲ್ಲಿ ವಿಚಾರಣೆಗೆ ಬಂದ ಸಿದ್ದರಾಮಯ್ಯರನ್ನು ಲೋಕಾಯುಕ್ತ ಅಧಿಕಾರಿಗಳು ಕೇವಲ ಒಂದೂವರೆ ಗಂಟೆ ವಿಚಾರಣೆ ನಡೆಸಿದ್ದಾರೆ. ಇಂದು ಪ್ರಾಥಮಿಕ ವಿಚಾರಣೆಯನ್ನಷ್ಟೇ ಮಾಡಿದ್ದಾರೆ ಎನ್ನಲಾಗಿದೆ.

ಮೊದಲೇ ಸಿದ್ಧಪಡಿಸಿದ ಕೆಲವೊಂದು ಪ್ರಶ್ನೆಗಳನ್ನು ಸಿಎಂಗೆ ಕೇಳಲಾಗಿದೆ. ಒಂದು ವೇಳೆ ಈ ಪ್ರಶ್ನೆಗಳಿಗೆ ಸಿಎಂ ನೀಡಿದ ಉತ್ತರ ಸಮಂಜಸವಾಗಿಲ್ಲ ಎಂದು ಅಧಿಕಾರಿಗಳಿಗೆ ಅನಿಸಿದರೆ ಮತ್ತೊಮ್ಮೆ ವಿಚಾರಣೆಗೆ ಕರೆಯುವ ಸಾಧ್ಯತೆಯಿದೆ. ವಿಚಾರಣೆ ಬಳಿಕ ಮೈಸೂರಿನ ಅತಿಥಿ ಗೃಹಕ್ಕೆ ತೆರಳಿದ್ದಾರೆ.

ಇಷ್ಟು ಬೇಗ ವಿಚಾರಣೆ ಮುಗಿಸಿರುವುದಕ್ಕೆ ವಿಪಕ್ಷಗಳಿಂದ ಟೀಕೆ ಬರುವುದು ಪಕ್ಕಾ. ಈಗಾಗಲೇ ಬಿಜೆಪಿ ನಾಯಕರು ಲೋಕಾಯುಕ್ತ ಸಂಸ್ಥೆ ರಾಜ್ಯ ಸರ್ಕಾರದ ಅಧೀನದಲ್ಲೇ ಇದೆ. ಹೀಗಿರುವಾಗ ಸಿಎಂ ವಿರುದ್ಧ ನಿಷ್ಪಕ್ಷಪಾತ ತನಿಖೆ ನಡೆಯಲು ಸಾಧ್ಯವಿಲ್ಲ ಎಂದು ವಾದಿಸುತ್ತೇ ಇದೆ. ಇದೀಗ ಕೆಲವೇ ಹೊತ್ತಿನ ವಿಚಾರಣೆ ನಡೆಸಿರುವುದಕ್ಕೆ ಟೀಕೆಗಳು ಎದುರಾಗಲಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಸುಡಾನ್‌ನಲ್ಲಿ ಭಯಾನಕ ಭೂಕುಸಿತ: ಗ್ರಾಮವೇ ಸರ್ವನಾಶ, ಸಾವಿರಾರು ಮಂದಿ ಸಾವು

ಸಚಿವ ಸ್ಥಾನ ಕಳೆದುಕೊಂಡ ರಾಜಣ್ಣ ನೂರಕ್ಕೆ ನೂರರಷ್ಟು ಬಿಜೆಪಿ ಸೇರುತ್ತಾರೆ: ಶಾಸಕ ಬಾಲಕೃಷ್ಣ ಹೊಸ ಬಾಂಬ್‌

ಧರ್ಮಸ್ಥಳ ವಿಚಾರದಲ್ಲಿ ಆರ್‌ಎಸ್‌ಎಸ್ ವರ್ಸಸ್ ಆರ್‌ಎಸ್‌ಎಸ್ ಹೋರಾಟ: ಪ್ರಿಯಾಂಕ್‌ ಖರ್ಗೆ ಟಾಂಗ್‌

ಪ್ರವಾಹ ಪರಿಸ್ಥಿತಿ ತಡೆಗೆ ಪಾಕ್‌ ರಕ್ಷಣಾ ಸಚಿವ ನೀಡಿದ ಸಲಹೆಗೆ ವಿಶ್ವವೇ ಶಾಕ್‌

ಕೆ ಕವಿತಾ ಅಮಾನತು: ಇದೊಂದು ದೊಡ್ಡ ನಾಟಕ ಎಂದ ಕಾಂಗ್ರೆಸ್‌ ಸಂಸದ ಅನಿಲ್ ಕುಮಾರ್‌

ಮುಂದಿನ ಸುದ್ದಿ
Show comments