Select Your Language

Notifications

webdunia
webdunia
webdunia
Saturday, 26 April 2025
webdunia

ಕಾರ್ಯಕರ್ತರ ನಡುವೆ ಮೋದಿ ವಿಜಯ ಸಂಕಲ್ಪ ಸಮಾವೇಶ

ಮೋದಿ
ಹಾವೇರಿ , ಮಂಗಳವಾರ, 26 ಫೆಬ್ರವರಿ 2019 (16:38 IST)
ಹಾವೇರಿ, ಧಾರವಾಡ, ಉತ್ತರ ಕನ್ನಡ ಲೋಕಸಭಾ ಕ್ಷೇತ್ರಗಳ ಮೋದಿ ವಿಜಯ ಸಂಕಲ್ಪ ಯಾತ್ರೆಯ ಸಮಾವೇಶ  ಹಾವೇರಿಯಲ್ಲಿ ನಡೆಯಿತು.

ಹಾವೇರಿ ನಗರದ ಮುನ್ಪಿಪಲ್ ಮೈದಾನದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.‌ ಎಸ್. ಯಡಿಯೂರಪ್ಪ ಸಮಾವೇಶಕ್ಕೆ ಚಾಲನೆ ನೀಡಿದ್ರು. ಸಮಾವೇಶವನ್ನು ಉದ್ದೇಶಿಸಿ ಮಾತನಾಡಿದ ಬಿ. ಎಸ್. ವೈ, ಲೋಕಸಭಾ ಚುನಾವಣೆಗೆ ಕೇವಲ ಏಳು ವಾರಗಳು ಬಾಕಿ ಇವೆ. ಚುನಾವಣೆ ಮುಗಿಯುವವರೆಗೂ ಎಲ್ಲ ಕಾರ್ಯಕರ್ತರು 22 ಸ್ಥಾನ ಗೆಲ್ಲುವವರೆಗೂ ಮನೆಗೆ ಹೋಗಬಾರದು ಎಂದು ಮನವಿ ಮಾಡಿದ್ರು.

ಪ್ರಧಾನಿ ನರೇಂದ್ರ ಮೋದಿಗೆ ಸರಿಸಾಟಿಯಾದ ವ್ಯಕ್ತಿ ಇಲ್ಲ. ಸೂರ್ಯ ಚಂದ್ರ ಇರುವುದು ಎಷ್ಟು ಸತ್ಯ ನರೇಂದ್ರ ಮೋದಿ ಪ್ರಧಾನಿ ಆಗುವುದು ಅಷ್ಟೇ ಸತ್ಯ ಎಂದ್ರು. ಕರ್ನಾಟಕದಿಂದ 22 ಸೀಟ್ ಗಳನ್ನು ಗೆಲ್ಲಿಸುವದು ನಮ್ಮ ಜವಾಬ್ದಾರಿಯಾಗಿದೆ ಎಂದು ಹೇಳಿದ್ರು.



Share this Story:

Follow Webdunia kannada

ಮುಂದಿನ ಸುದ್ದಿ

ಪಾಕ್ ಉಗ್ರಸ್ಥಾನ ಧ್ವಂಸ; ರಾಹುಲ್ ಗೆ ಅಭಿನಂದಿಸಿದ ಸಚಿವ!