Select Your Language

Notifications

webdunia
webdunia
webdunia
webdunia

ನಿರಂತರ ವಿದ್ಯುತ್‌ಗಾಗಿ ಶಾಸಕರ ಪಾದಯಾತ್ರೆ

ನಿರಂತರ ವಿದ್ಯುತ್‌ಗಾಗಿ ಶಾಸಕರ ಪಾದಯಾತ್ರೆ
ರಾಯಚೂರು , ಸೋಮವಾರ, 27 ನವೆಂಬರ್ 2017 (20:11 IST)
ತಾಲ್ಲೂಕಿಗೆ ನಿರಂತರವಾಗಿ ವಿದ್ಯುತ್‌ ಸರಬರಾಜು ಮಾಡಲು ಒತ್ತಾಯಿಸಿ ಗ್ರಾಮೀಣ ಶಾಸಕ ತಿಪ್ಪರಾಜು ಹವಾಲ್ದಾರ ಅವರು ರೈತರೊಂದಿಗೆ ಪಂಚಮುಖಿ ಗಾಣಧಾಳದಿಂದ ಶಕ್ತಿನಗರದ ಶಾಖೋತ್ಪನ್ನ ವಿದ್ಯುತ್ ಕೇಂದ್ರದವರೆಗೆ ಪಾದಯಾತ್ರೆ ಆರಂಭಿಸಿದರು.

ಮೂರು ದಿನಗಳು ನಡೆಯುವ ಪಾದಯಾತ್ರೆಯಲ್ಲಿ ತಾಲ್ಲೂಕಿನ ಮಿಟ್ಟಿ ಮಲ್ಕಾಪುರದಿಂದ ನಗರ ಶಾಸಕ ಡಾ.ಶಿವರಾಜ ಪಾಟೀಲ ಅವರು ಕೂಡ ಭಾಗಿಯಾಗಲಿದ್ದಾರೆ. ರಾಯಚೂರಿನ ಶಕ್ತಿನಗರ ಶಾಖೋತ್ಪನ್ನ ವಿದ್ಯುತ್‌ ಕೇಂದ್ರಕ್ಕೆ ಪಾದಯಾತ್ರೆ ನಡೆಸಿ, ಅಲ್ಲಿ ಅನಿರ್ಧಿಷ್ಟ ಧರಣಿ ನಡೆಸಲು ನಿರ್ಧರಿಸಿದ್ದಾರೆ.

ಪಾದಯಾತ್ರೆ ಚಾಲನೆ ನೀಡಿದ ದೇವದುರ್ಗ ಶಾಸಕ ಕೆ.ಶಿವನಗೌಡ ನಾಯಕ ಮಾತನಾಡಿ, ಮೂರು ದಿನಗಳಲ್ಲಿ ವಿದ್ಯುತ್‌ ಸರಬರಾಜಿನ ಆದೇಶ ಹೊರಡದಿದ್ದರೆ ನಿರಂತರವಾಗಿ ಧರಣಿಯಲ್ಲಿ ತಾವು ಕೂಡ ಭಾಗವಹಿಸುವುದಾಗಿ ಘೋಷಿಸಿದರು.

ಶಾಸಕರ ಪಾದಯಾತ್ರೆ ಬೆಂಬಲಿಸಿ ವಿವಿಧ ಗ್ರಾಮಗಳ ಜನರು ಭಾಗವಹಿಸಿದ್ದರು.

Share this Story:

Follow Webdunia kannada

ಮುಂದಿನ ಸುದ್ದಿ

1 ಕೋಟಿ ವಿಮೆ ಹಣ ಪಡೆಯಲು ಮಹಿಳೆ ಮಾಡಿದ ಡ್ರಾಮ ನೋಡಿದ್ರೆ ಬೆಚ್ಚಿ ಬೀಳ್ತಿರಿ