Webdunia - Bharat's app for daily news and videos

Install App

ಬಿಜೆಪಿಯಲ್ಲ, ಈಗ ಇರೋದು ಸಿದ್ದರಾಮಯ್ಯ ಸರ್ಕಾರ, ಕೂತ್ಕೊಳ್ರೀ ಸುಮ್ನೆ: ವೇದಿಕೆಯಲ್ಲಿ ಪ್ರದೀಪ್ ಈಶ್ವರ್ ಆವಾಜ್

Krishnaveni K
ಶನಿವಾರ, 15 ಮಾರ್ಚ್ 2025 (09:32 IST)
ಬೆಂಗಳೂರು: ನಗರದಲ್ಲಿ ನಿನ್ನೆ ಸಂಜೆ ಕೈವಾರ ತಾತಯ್ಯ ಜಯಂತಿ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ಆದರೆ ಈ ಕಾರ್ಯಕ್ರಮ ರಾಜಕೀಯ ಜಿದ್ದಾಜಿದ್ದಿಯ ವೇದಿಕೆಯಾಯ್ತು. ಈಗ ಇರೋದು ಬಿಜೆಪಿಯಲ್ಲ, ಸಿದ್ದರಾಮಯ್ಯ ಸರ್ಕಾರ, ಕೂತ್ಕೊಳ್ರೀ ಸುಮ್ನೇ ಎಂದು ಶಾಸಕ ಪ್ರದೀಪ್ ಈಶ್ವರ್ ಆವಾಜ್ ಹಾಕಿದ ಘಟನೆ ನಡೆದಿದೆ.
 

ವೇದಿಕೆಯಲ್ಲಿ ಬಿಜೆಪಿ ಸಂಸದ ಪಿಸಿ ಮೋಹನ್ ಕೂಡಾ ಇದ್ದರು. ಇದು ಸರ್ಕಾರೀ ಕಾರ್ಯಕ್ರಮವಾಗಿತ್ತು. ಆದರೆ ರಾಜಕೀಯ ರಣರಂಗವಾಗಿದ್ದು ವಿಪರ್ಯಾಸ. ಮೊದಲು ತಮ್ಮ ಸರದಿ ಬಂದಾಗ ಮಾತನಾಡಲು ಆರಂಭಿಸಿದ ಪ್ರದೀಪ್ ಈಶ್ವರ್ ‘ನನ್ನ ಎದೆಯಲ್ಲಿ ರಾಮನೂ ಇದ್ದಾನೆ, ಸಿದ್ದರಾಮಯ್ಯನೂ ಇದ್ದಾರೆ’ ಎಂದರು.

ಈ ವೇಳೆ ಮುಂಭಾಗದಲ್ಲಿ ಕೂತಿದ್ದ ಬಲಿಜ ಸಮುದಾಯದ ಪಿಕೆ ಸುರೇಶ್ ಎದ್ದು ನಿಂತು ದಿ ಗ್ರೇನ್ ಮರ್ಚೆಂಟ್ಸ್ ಕೋ ಆಪರೇಟಿವ್ ಬ್ಯಾಂಕ್ ಚುನಾವಣೆಗೆ ಪ್ರವರ್ಗ ಬಿ-ಯಲ್ಲಿ ನಾನು ಸ್ಪರ್ಧಿಸಿದ್ದೆ. ಅಲ್ಲಿ ನನಗೆ ಬೆಂಬಲ ನೀಡಿಲ್ಲ. ಬಲಿಜ ಸಮುದಾಯದಿಂದ ಬೇರೆ ವ್ಯಕ್ತಿಯನ್ನು ನಿಲ್ಲಿಸುತ್ತೀರಾ ಎಂದು ತಕರಾರು ತೆಗೆದಿದ್ದಾರೆ.

ಆಗ ಪ್ರದೀಪ್ ಈಶ್ವರ್, ನೀವು ಸಮುದಾಯವನ್ನು ವಿಭಜಿಸಲು ಬಂದಿದ್ದೀರಾ ಕೂತ್ಕೊಳ್ರೀ ಸುಮ್ನೇ ಎಂದರು. ಆದರೂ ಸುರೇಶ್ ಸುಮ್ಮನಾಗಲಿಲ್ಲ. ಆಗ ಮತ್ತಷ್ಟು ಕೋಪಗೊಂಡ ಪ್ರದೀಪ್ ಈಶ್ವರ್, ಬಾಯಿ ಮುಚ್ಚಿಕೊಂಡಿರಿ, ಈಗ ಇರೋದು ಬಿಜೆಪಿ ಸರ್ಕಾರವಲ್ಲ, ಕಾಂಗ್ರೆಸ್ ಸರ್ಕಾರ. ನೀವು ನಿಮ್ಮ ಪಕ್ಷದ ಗುಣಗಾನ ಮಾಡಿದ್ರೆ ನಾನೂ ನನ್ನ ಪಕ್ಷದ ಗುಣಗಾನ ಮಾಡಬೇಕಾಗುತ್ತದೆ. ಈಗ ಇರೋದು ಸಿದ್ದರಾಮಯ್ಯ ಸರ್ಕಾರ, ನಿಮ್ಮಪ್ಪಂದಲ್ಲ’ ಎಂದರು.

ಆಗ ಆಸನದಿಂದ ಎದ್ದು ಬಂದ ಬಿಜೆಪಿ ಸಂಸದ, ಇದು ಸಿದ್ದರಾಮಯ್ಯ ಸರ್ಕಾರದ ಕಾರ್ಯಕ್ರಮ ಎಂದರೆ ನಾವು ಬಿಜೆಪಿ ಸಂಸದರು ಇಲ್ಲಿ ಇರಬೇಕಾ ಎಂದು ಆಕ್ರೋಶದಿಂದಲೇ ಪ್ರಶ್ನೆ ಮಾಡಿದರು. ನಿರೂಪಕರು ಎಷ್ಟೇ ಸಮಾಧಾನಿಸಲು ಯತ್ನಿಸಿದರೂ ಇಬ್ಬರ ನಡುವೆ ಮಾತು ಮುಂದುವರಿದಿತ್ತು. ಕೊನೆಗೆ ಪ್ರದೀಪ್ ಈಶ್ವರ್ ನೀವೇ ಕಾರ್ಯಕ್ರಮ ಮಾಡಿಕೊಳ್ಳಿ ಎಂದು ಅಲ್ಲಿಂದ ಎದ್ದು ಹೋದರು.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ರೈಲ್ವೆ ಹಳಿಗಳ ಮೇಲೆ ಕಾರು ಚಲಾಯಿಸಿ ಮಹಿಳೆಯ ಹುಚ್ಚಾಟ, Video

ವಯನಾಡು ಭೂಕುಸಿತದ ವೇಳೆ ನಿರ್ಮಾಣವಾಗಿದ್ದ ಬೈಲಿ ಸೇತುವೆ ಗೋಡೆ ಬಿರುಕು: ಸಂಚಾರ ಸ್ಥಗಿತ

ವಿಮಾನ ದುರಂತಕ್ಕೆ ಕಾರಣ ಹುಡುಕುತ್ತಿದ್ದ ಅಧಿಕಾರಿಗಳಿಗೆ ಸಿಕ್ತು ಬಿಗ್‌ ಅಪ್ಡೇಟ್‌

ಮೇಘಲಾಯ ಹನಿಮೂನ್ ಪ್ರಕರಣ: ಸೋನಮ್ ಪ್ರಿಯಕರನಿಂದ ಸಿಕ್ತು ಮಹತ್ವದ ಸಾಕ್ಷಿ

ಜಮೀರ್ ಸ್ಥಾನ ಕಸಿಯಲು ನನಗೇನು ತೆವಲಾ: ಬೇಳೂರು ಗೋಪಾಲಕೃಷ್ಣ

ಮುಂದಿನ ಸುದ್ದಿ
Show comments