Webdunia - Bharat's app for daily news and videos

Install App

ದೇವ್ರಾಣೆ ರೇಪ್ ಮಾಡಿಲ್ಲ, ಮಾಡಿದ್ರೆ ರಕ್ತ ಕಾರಿ ಸಾಯ್ತೀನಿ ಎಂದ ಶಾಸಕ ಮುನಿರತ್ನ

Krishnaveni K
ಮಂಗಳವಾರ, 12 ನವೆಂಬರ್ 2024 (15:18 IST)
ಬೆಂಗಳೂರು: ಮಹಿಳೆಯ ಮೇಲೆ ರೇಪ್ ಮಾಡಿದ ಆರೋಪದಲ್ಲಿ ಬಂಧಿತರಾಗಿದ್ದ ಬಿಜೆಪಿ ಶಾಸಕ ಮುನಿರತ್ನ ತಮ್ಮ ಮೇಲಿನ ಆರೋಪ ನಿರಾಕರಿಸಿದ್ದು ನಾನು ದೇವ್ರಾಣೆ ರೇಪ್ ಮಾಡಿಲ್ಲ, ಮಾಡಿದ್ರೆ ರಕ್ತ ಕಾರಿ ಸಾಯ್ತೀನಿ ಎಂದಿದ್ದಾರೆ.

ರಾಜರಾಜೇಶ್ವರಿ ನಗರದ ಶಾಸಕರಾಗಿರುವ ಮುನಿರತ್ನ ರೇಪ್ ಕೇಸ್ ನಲ್ಲಿ ಬಂಧಿತರಾಗಿದ್ದರು. ಇದೀಗ ಷರತ್ತು ಬದ್ಧ ಜಾಮೀನು ಪಡೆದು ಹೊರಗೆ ಬಂದಿದ್ದಾರೆ. ತಮ್ಮ ಸ್ವ ಕ್ಷೇತ್ರದಲ್ಲಿ ಕಾರ್ಯಕ್ರಮವೊಂದರಲ್ಲಿ ಭಾಗಿಯಾದ ಅವರು ತಾನು ದೇವ್ರಾಣೆ ರೇಪ್ ಮಾಡಿಲ್ಲ ಎಂದಿದ್ದಾರೆ.

ಆ ಕಾಲಭೈರವೇಶ್ವರನ ಆಣೆಗೂ ನಾನು ರೇಪ್ ಮಾಡಿಲ್ಲ. ಒಂದು ವೇಳೆ ಮಾಡಿದ್ರೆ ರಕ್ತ ಕಾರಿ ಸಾಯ್ತೀನಿ ಎಂದು ಹೇಳಿದ್ದಾರೆ. ನಾನು ಮಹಿಳೆಯರನ್ನು ಗೌರವದಿಂದಲೇ ಮಾತನಾಡಿಸುತ್ತೇನೆ. ಯಾರೇ ನನ್ನ ಬಳಿ ಬಂದರೂ ಏನಮ್ಮಾ ತಾಯಿ ಎಂದೇ ಪದ ಬಳಸುತ್ತೇನೆ. ಆದರೆ ಈ ರೀತಿ ನನ್ನ ವಿರುದ್ಧ ಸುಳ್ಳು ದೂರು ಕೊಡಬಾರದಿತ್ತು ಎಂದಿದ್ದಾರೆ.

ದೇವರ ಆಣೆಗೂ ನಾನು ಯಾವುದೇ ತಪ್ಪನ್ನೂ ಮಾಡಿಲ್ಲ. ನೀವು ಕೊಟ್ಟ ಭಿಕ್ಷೆಯಿಂದ ನಾನು ಎಂಎಲ್ಎ ಆಗಿದ್ದಾನೆ. ನೀವು ರಾಜೀನಾಮೆ ಕೊಡಿ ಎಂದರೆ ತಕ್ಷಣವೇ ಕೊಡುತ್ತೇನೆ ಎಂದಿದ್ದಾರೆ. ಮಹಿಳೆಯೊಬ್ಬರು ಸಹಾಯ ಮಾಡುವ ನೆಪದಲ್ಲಿ ಅತ್ಯಾಚಾರ ಮಾಡಿದ್ದರು ಎಂದು ಕಗ್ಗಲೀಪುರ ಠಾಣೆಯಲ್ಲಿ ದೂರು ನೀಡಿದ್ದಳು.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

Gold Price today: ಅಬ್ಬಾ.. ಚಿನ್ನದ ದರ ಇಷ್ಟೊಂದಾ ಎನ್ನುವಷ್ಟಾಗಿದೆ ನೋಡಿ

Air India Plane crash: ವಿಮಾನ ದುರಂತ ವೀಕ್ಷಿಸಿ ರೀಲ್ಸ್ ಮಾಡ್ತೀರಾ, ಸಚಿವ ರಾಮಮೋಹನ್ ನಾಯ್ಡುಗೆ ತರಾಟೆ

Air India plane crash: ವಿಮಾನ ಪತನಕ್ಕೆ ಇದೇ ಕಾರಣನಾ

Rahul Gandhi: ಅಪಘಾತವಾದ ವಿಮಾನದಲ್ಲಿ ನೀವಿರಬೇಕಿತ್ತು, ರಾಹುಲ್ ಗಾಂಧಿಗೆ ಹೇಳಿದ ಎಕ್ಸ್ ಬಳಕೆದಾರ

Air India Plane crash: ಬೆಳ್ಳಂ ಬೆಳಿಗ್ಗೆಯೇ ಅಹಮ್ಮದಾಬಾದ್ ಗೆ ಓಡೋಡಿ ಬಂದ ಮೋದಿ video

ಮುಂದಿನ ಸುದ್ದಿ
Show comments