Select Your Language

Notifications

webdunia
webdunia
webdunia
webdunia

ಗಂಜಿ ಕೇಂದ್ರ ವೀಕ್ಷಿಸಿದ ಸಚಿವರು!

ಗಂಜಿ ಕೇಂದ್ರ ವೀಕ್ಷಿಸಿದ ಸಚಿವರು!
ಕೊಡಗು , ಶುಕ್ರವಾರ, 17 ಆಗಸ್ಟ್ 2018 (15:27 IST)
ರಾಜ್ಯದಲ್ಲಿ ಧಾರಕಾರವಾಗಿ ಸುರಿದ ಮಳೆಯಿಂದ ಕೆಲವು ಹಳ್ಳಿಗಳು ಜಲಾವೃತಗೊಂಡಿವೆ. ಹಲವೆಡೆ ಸರಕಾರದಿಂದ ಗಂಜಿ ಕೇಂದ್ರಗಳನ್ನು ಆರಂಭಿಸಲಾಗಿದೆ. ಕಾವೇರಿ ನದಿ ಪಾತ್ರದಲ್ಲಿ ಮುಳುಗಡೆಯಾಗಿರುವ ಗ್ರಾಮಗಳನ್ನು ಕಂದಾಯ ಹಾಗೂ ಪ್ರವಾಸೋದ್ಯಮ ಸಚಿವರು ವೀಕ್ಷಣೆ ಮಾಡಿದರು.

ಭಾರಿ ಮಳೆಯಿಂದ ಕೊಡಗು ಜಿಲ್ಲೆಯ ಹಳ್ಳಿಗಳು ಜಲಾವೃತಗೊಂಡಿವೆ. ಕೊಡಗಿನ ಗಡಿ ಗ್ರಾಮ ಹಾಗೂ
ಪಿರಿಯಾಪಟ್ಟಣ ತಾಲೂಕಿನ  ಕೊಪ್ಪ ಗ್ರಾಮಕ್ಕೆ ಸಚಿದ್ವಯರು ಭೇಟಿ ನೀಡಿದರು. ಕಂದಾಯ ಸಚಿವ ಆರ್. ವಿ. ದೇಶಪಾಂಡೆ ಹಾಗೂ ಪ್ರವಾಸೋದ್ಯಮ ಸಚಿವ ಸಾ.ರಾ. ಮಹೇಶ್ ಭೇಟಿ ನೀಡಿದರು. ಕಾವೇರಿ ನದಿ ಪಾತ್ರದಲ್ಲಿ ಮುಳುಗಡೆಯಾಗಿರುವ ಗ್ರಾಮಗಳನ್ನು ವೀಕ್ಷಣೆ ಮಾಡಿದರು. ಕೊಪ್ಪ ಗ್ರಾಮದಲ್ಲಿ ತೆರೆಯಲಾಗಿರುವ ಗಂಜಿ ಕೇಂದ್ರವನ್ನು ಪರಿಶೀಲಿಸಿದರು. ಸಂತ್ರಸ್ಥರಿಗೆ ಅಗತ್ಯ ನೆರವನ್ನು ಕಲ್ಪಿಸುವಂತೆ ಅಧಿಕಾರಿಗಳಿಗೆ ಸಚಿವರು ಸೂಚಿಸಿದರು.




Share this Story:

Follow Webdunia kannada

ಮುಂದಿನ ಸುದ್ದಿ

ವಾಜಪೇಯಿಗೆ ನಮನ: ಅರ್ಧಕ್ಕೆ ಹಾರಿದ ಬಿಜೆಪಿ ಧ್ವಜ