Webdunia - Bharat's app for daily news and videos

Install App

ಅಬಕಾರಿ ಸಚಿವ ತಿಮ್ಮಾಪುರ ಆಪ್ತನಿಂದ ಬ್ರಹ್ಮಾಂಡ ಭ್ರಷ್ಟಾಚಾರ: ಲೈಸೆನ್ಸ್ ಗಾಗಿ ನಡೆಯುತ್ತಿತ್ತು ಕೋಟಿಗಟ್ಟಲೆ ವ್ಯವಹಾರ

Krishnaveni K
ಗುರುವಾರ, 7 ನವೆಂಬರ್ 2024 (09:56 IST)
ಬೆಂಗಳೂರು: ಈಗಷ್ಟೇ ಮುಡಾ ಹಗರಣ, ವಾಲ್ಮೀಕಿ ಹಗರಣದಿಂದ ರಾಜ್ಯ ಕಾಂಗ್ರೆಸ್ ಸರ್ಕಾರ ಸಾಕಷ್ಟು ಟೀಕೆಗೆ ಗುರಿಯಾಗಿದೆ. ಇದರ ನಡುವೆ ಈಗ ಅಬಕಾರಿ ಇಲಾಖೆಯಲ್ಲೂ ಹಗರಣ ಆರೋಪ ಕೇಳಿಬಂದಿದ್ದು ರಾಜ್ಯಪಾಲರಿಗೆ ಇಲಾಖೆಯ ಅಧಿಕಾರಿಗಳೇ ದೂರು ನೀಡಿದ್ದಾರೆ ಎನ್ನಲಾಗಿದೆ.

ನಿನ್ನೆಯಷ್ಟೇ ವಿಪಕ್ಷ ನಾಯಕ ಆರ್ ಅಶೋಕ್,  ಅಬಕಾರಿ ಸಚಿವ ತಿಮ್ಮಾಪುರ ಅಣತಿಯಂತೆ ಪ್ರತೀ ವಾರ ತಲಾ 20 ಸಾವಿರ ರೂ.ಗಳಂತೆ 18 ಕೋಟಿ ರೂ.ಗಳಂತೆ ಮದ್ಯದಂಗಡಿಗಳ ಮಾಲಿಕರಿಂದ ಹಫ್ತಾ ವಸೂಲಿ ಮಾಡಲಾಗುತ್ತಿದೆ ಎಂದು ಆರೋಪಿಸಿದ್ದರು. ಈ ಬಗ್ಗೆ ಮದ್ಯದಂಗಡಿ ಮಾಲಿಕರು ದೂರು ಕೂಡಾ ನೀಡಿದ್ದರು ಎಂದಿದ್ದರು.

ಆದರೆ ಈಗ ಬಂದಿರುವ ಮಾಹಿತಿ ಪ್ರಕಾರ ಅಬಕಾರಿ ಇಲಾಖೆ ಅಧಿಕಾರಿಯೇ ರಾಜ್ಯಪಾಲರಿಗೆ ದೂರು ನೀಡಿದ್ದಾರೆ ಎನ್ನಲಾಗುತ್ತಿದೆ. ಅಬಕಾರಿ ಸಚಿವ ತಿಮ್ಮಾಪುರ ಮತ್ತು ಅವರ ಆಪ್ತ ಜೀವನ್ ಶೆಟ್ಟಿ  ವಿರುದ್ಧ ದೂರು ನೀಡಲಾಗಿದೆ. ಮುಖ್ಯವಾಗಿ ಜೀವನ್ ಶೆಟ್ಟಿಯಿಂದಲೇ ಅಕ್ರಮ ನಡೆಯುತ್ತಿದೆ ಎನ್ನಲಾಗಿದೆ.

ಸಿಎಲ್-2 ಲೈಸೆನ್ಸ್ ಕೊಡಿಸುತ್ತೇನೆಂದು ಬಾರ್ ಮಾಲಿಕರಿಂದ ಕೋಟ್ಯಾಂತರ ರೂಪಾಯಿ ವಸೂಲಿ ಮಾಡುತ್ತಿದ್ದಾನೆ ಎಂದು ಆರೋಪಿಸಲಾಗಿದೆ. ಆದರೆ ಯಾರಿಗೂ ಲೈಸೆನ್ಸ್ ಕೊಡಿಸಿಲ್ಲ. ಕೇಳಲು ಹೋದರೆ ಸಚಿವ ತಿಮ್ಮಾಪುರಗೆ ಹಣ ಕೊಟ್ಟಿದ್ದೇನೆ ಎನ್ನುತ್ತಾನೆ ಎಂದು ದೂರಲಾಗಿದೆ.

ಬಾರ್ ಮಾಲಿಕರೂ ಜೀವನ ಶೆಟ್ಟಿ ವಿರುದ್ಧ ಲಂಚ ಪಡೆದ ಆರೋಪ ಮಾಡುತ್ತಿದ್ದಾರೆ. 10 ಲಕ್ಷ ರೂ.ಗಳಿಂದ 25 ಲಕ್ಷ ರೂ.ವರೆಗೆ ಪರವಾನಗಿ ಕೊಡಿಸಲು, ವರ್ಗಾವಣೆಗೆ 40 ರಿಂದ 50 ಲಕ್ಷ ರೂ. ವಸೂಲಿ ಮಾಡಿದ್ದಾನೆ. ಕೇಳಲು ಹೋದರೆ ಧಮ್ಕಿ ಹಾಕುತ್ತಾನೆ ಎಂದು ಬಾರ್ ಮಾಲಿಕರು ಅಳಲು ತೋಡಿಕೊಂಡಿದ್ದಾರೆ. ಉಪಚುನಾವಣೆ ಹೊಸ್ತಿಲಲ್ಲಿ ಸರ್ಕಾರಕ್ಕೆ ಈಗ ಮತ್ತೊಂದು ಮುಜುಗರ ಎದುರಾಗಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

Pehalgam terror attack: ಇಸ್ರೇಲ್ ಬಳಿಕ ಭಾರತಕ್ಕೆ ಬಂದಿಳಿದ ಅಮೆರಿಕಾದ ಯುದ್ಧ ವಿಮಾನ: ಏನಿದರ ಹಿಂದಿನ ಲೆಕ್ಕಾಚಾರ

Mangaluru: ಪಹಲ್ಗಾಮ್ ಉಗ್ರರ ದಾಳಿಯನ್ನು ಸಮರ್ಥಿಸಿ ಫೇಸ್ ಬುಕ್ ನಲ್ಲಿ ಪೋಸ್ಟ್

Gold Price today: ಚಿನ್ನದ ದರ ಇಂದು ಮತ್ತೆ ಏರಿಕೆ, ಎಷ್ಟಾಗಿದೆ ನೋಡಿ

Pehalgam: ಪಹಲ್ಗಾಮ್ ನಲ್ಲಿ ರಕ್ತಪಾತ ಮಾಡಿದ ಉಗ್ರರು ಈಗ ಎಲ್ಲಿದ್ದಾರೆ ಎಂಬುದು ಪತ್ತೆ

Viral Video: ಈ ಮಕ್ಕಳಿಗೆ ಯೋಧರ ಮೇಲೆ ಅದೆಂಥಾ ಗೌರವ ನೀವೇ ವಿಡಿಯೋ ನೋಡಿ

ಮುಂದಿನ ಸುದ್ದಿ
Show comments