Publish Date: Tue, 19 Dec 2017 (13:26 IST)
Updated Date: Tue, 19 Dec 2017 (13:29 IST)
ಇವಿಎಮ್ ಮಷಿನ್ಗಳ ಮೇಲೆ ಜನರಿಗೆ ಅನುಮಾನ ಇದ್ದು ಅದನ್ನ ಹೊಗಲಾಡಿಸಲು ನಮಗೆ ಮಷಿನ್ ನೀಡಿ ಸಂಶೋಧನೆಗೆ ಅವಕಾಶ ಕೊಡಿ ಎಂದು ಪ್ರವಾಸೋದ್ಯಮ ಖಾತೆ ಸಚಿವ ಪ್ರಿಯಾಂಕಾ ಖರ್ಗೆ ಕೇಂದ್ರ ಸರಕಾರಕ್ಕೆ ಪತ್ರ ಬರೆಯುವುದಾಗಿ ಮಾಹಿತಿ ನೀಡಿದ್ದಾರೆ.
ಈಗಾಗಲೇ ಪತ್ರ ಸಿದ್ದಗೊಂಡಿದ್ದು ನಿನ್ನೆಯಷ್ಟೇ ಸಿಎಂ ಇದಕ್ಕೆ ಸಮ್ಮತಿ ಸೂಚಿಸಿದ್ದು ನಾಳೆ ಬೆಂಗಳೂರಿಗೆ ಹೋದ ಕೂಡಲೇ ಪತ್ರ ವನ್ನು ಕೇಂದ್ರಕ್ಕೆ ರವಾನಿಸುವುದಾಗಿ ತಿಳಿಸಿದ್ದಾರೆ.
ಬಹಳಷ್ಟು ರಾಜಕಾರಣಿಗಳಿಗೆ ತಂತ್ರಜ್ಞಾನದ ಮಾಹಿತಿ ಇಲ್ಲ. ಹೀಗಾಗಿ ನೋಕಿಯಾ, ಇಂಟೆಲ್ ಸೇರಿದಂತೆ ಹಲವು ಕಾರ್ಪೋರೇಟರ್ ಕಂಪನಿಗಳ ಕೈಯಲ್ಲಿ ಎಲ್ಲರ ಸಮ್ಮುಖದಲ್ಲಿ ಮಷಿನ್ ನೀಡಿ ಸಂಶೋಧನೆ ನಡೆಸೋಣ ಅದರಲ್ಲಿ ಯಾವ ವರದಿ ಬರುತ್ತೊ ಅದನ್ನ ನಾವೂ ಒಪ್ಪಿಕೊಳ್ಳುತ್ತೇವೆ ಎಂದು ಸಚಿವ ಪ್ರಿಯಾಂಕಾ ಖರ್ಗೆ ಹೇಳಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ
ಮೊಬೈಲ್ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ.