Select Your Language

Notifications

webdunia
webdunia
webdunia
webdunia

ಅಕ್ಕನ ಸ್ಥಾನದಲ್ಲಿ ಪ್ರದೀಪ್‌ ಈಶ್ವರ್‌, ಪ್ರತಾಪ್ ಸಿಂಹಗೆ ಸಚಿವ ಲಕ್ಷ್ಮೀ ಹೆಬ್ಬಾಳ್ಕರ್ ಕಿವಿಮಾತು

Lakshmi Hebbalkar

Sampriya

ಉಡುಪಿ , ಶನಿವಾರ, 1 ನವೆಂಬರ್ 2025 (17:37 IST)
Photo Credit X
ಉಡುಪಿ: ಪ್ರತಾಪ್ ಸಿಂಹ ಹಾಗೂ ಪ್ರದೀಪ್ ಈಶ್ವರ್‌ಗೆ ಅಕ್ಕನ ಸ್ಥಾನದಲ್ಲಿ ನಿಂತು ಕಿವಿಮಾತನ್ನು ಹೇಳುತ್ತೇನೆಂದು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿದರು. 

ಉಡುಪಿಯಲ್ಲಿ ಮಾತನಾಡಿದ ಸಚಿವೆ, ನನ್ನ ವಿಚಾರದಲ್ಲೂ ಬಹಳಷ್ಟು ಅಪಮಾನಗಳನ್ನು ಅನುಭವಿಸಿದ್ದೇನೆ. ರಾಜಕಾರಣಿಗಳನ್ನು ಜನ ಗಮನಿಸುತ್ತಿರುವಾಗ , ನಾವು ರೋಲ್ ಮಾಡೆಲ್ ಆಗಿ ಬದುಕಬೇಕು ಹೊರತು ನಾಚಿಕೆ ಆಗುವ ಹಾಗೇ ಅಲ್ಲ ಅಲ್ಲ ಎಂದರು. 

ನಿಮ್ಮ ಆಚಾರ-ವಿಚಾರ ಭಾಷೆಯನ್ನು ಜನ ನೋಡ್ತಾರೆ. ನಿಮ್ಮ ತಂದೆ-ತಾಯಿಯನ್ನು ಎಳ್ಕೊಂಡು ಬರುವುದು ಸರಿಯಲ್ಲ, ಇಲ್ಲಿಗೆ ಬಿಟ್ಟುಬಿಡಿ. ಬುದ್ಧಿವಂತರಾಗಿರುವ ಇಬ್ಬರು, ಇಲ್ಲಿಗೆ ಬಿಟ್ಟುಬಿಡಿ. ಅಕ್ಕನ ಸ್ಥಾನದಲ್ಲಿ ನಿಂತು ಇಬ್ಬರಿಗೂ ಕಿವಿಮಾತು ಹೇಳುತ್ತೇನೆಂದರು.

ಈಚೆಗೆ ಮಾಜಿ ಸಂಸದ ಪ್ರತಾಪ್ ಸಿಂಹ ಹಾಗೂ ಶಾಸಕ ಪ್ರದೀಪ್ ಈಶ್ವರ್ ನಡುವೆ ಭಾರೀ ಮಾತಿನ ಚಕಮಕಿ ನಡೆದಿತ್ತು. 


Share this Story:

Follow Webdunia kannada

ಮುಂದಿನ ಸುದ್ದಿ

ಬಿಜೆಪಿ ನಾಯಕರು ಯಾವಾಗ ವರ್ತಮಾನದಲ್ಲಿರುತ್ತಾರೆ: ಪ್ರಿಯಾಂಕಾ ಗಾಂಧಿ