Select Your Language

Notifications

webdunia
webdunia
webdunia
webdunia

ಸಿದ್ದರಾಮಯ್ಯ ಪತ್ನಿಗೆ ಅಣ್ಣ ಉಡುಗೊರೆ ಕೊಟ್ಟರೆ ಹಗರಣ ಹೇಗಾಗುತ್ತದೆ: ಇಂಧನ ಸಚಿವ ಕೆ.ಜೆ.ಜಾರ್ಜ್

KJ George

Krishnaveni K

ಮೈಸೂರು , ಶುಕ್ರವಾರ, 9 ಆಗಸ್ಟ್ 2024 (16:04 IST)
ಮೈಸೂರು: ಗ್ಯಾರಂಟಿ ಯೋಜನೆಗಳನ್ನು ಜೆಡಿಎಸ್, ಬಿಜೆಪಿಯವರು ಕೇವಲ ಚುನಾವಣಾ ಗಿಮಿಕ್ ಎಂದು ಜರಿದರು. ಆದರೆ ಸಿದ್ದರಾಮಯ್ಯ ಅವರು ಹಾಗೂ ಡಿ.ಕೆ.ಶಿವಕುಮಾರ್ ಅವರು ಮೊದಲ ಕ್ಯಾಬಿನೆಟ್ ಸಭೆಯಲ್ಲಿ ಐದು ಗ್ಯಾರಂಟಿಗಳನ್ನು ಜಾರಿಗೆ ತಂದೆವು. ರಾಜ್ಯದ ಹೆಣ್ಣುಮಕ್ಕಳು ಇದರ ಹೆಚ್ಚು ಲಾಭವನ್ನು ಪಡೆಯುತ್ತಿದ್ದಾರೆ ಎಂದು ಇಂಧನ ಸಚಿವ ಕೆಜೆ ಜಾರ್ಜ್ ಬಿಜೆಪಿ ಪಾದಯಾತ್ರೆ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಮೈಸೂರಿನಲ್ಲಿ ಇಂದು ಜನಾಂದೋಲನ ಸಮಾವೇಶದಲ್ಲಿ ಮಾತನಾಡಿದ ಅವರು ಪಾದಯಾತ್ರೆ ಮಾಡುತ್ತಿರುವ ಬಿಜೆಪಿ ಮತ್ತು ಜೆಡಿಎಸ್ ವಿರುದ್ಧ ಹರಿಹಾಯ್ದರು. ಕಾಂಗ್ರೆಸ್ ಸರ್ಕಾರ ಇರುವತನಕ ಐದೂ ಗ್ಯಾರಂಟಿಗಳು ಇದ್ದೇ ಇರುತ್ತವೆ. ಯಾವುದೇ ಕಾರಣಕ್ಕೂ ಗ್ಯಾರಂಟಿ ಯೋಜನೆಗಳನ್ನು ನಾವು ನಿಲ್ಲಿಸುವುದಿಲ್ಲ. ನಮ್ಮ ಗ್ಯಾರಂಟಿ ಯೋಜನೆಗಳನ್ನೇ ಬೇರೆ ರಾಜ್ಯಗಳು ನಕಲು ಮಾಡುತ್ತಿವೆ.

ಪಾಪದ ವಿಮೋಚನೆಗಾಗಿ ಪಾಪಯಾತ್ರೆ ಮಾಡುತ್ತಿದ್ದಾರೆ. ಪಾದಯಾತ್ರೆ ಮಾಡಿದ ತಕ್ಷಣ ಅವರ ಪಾಪಗಳೆಲ್ಲಾ ಹೋಗುತ್ತವೆ ಎಂದು ಎಂದುಕೊಂಡರು. ಅವರು ಬೆಂಗಳೂರಿನಿಂದ ಮೈಸೂರಿಗೆ ಪಾದಯಾತ್ರೆ ಮಾಡಿದರೆ ಸಾಲುವುದಿಲ್ಲ. ಇಡೀ ರಾಜ್ಯ, ದೇಶವನ್ನು ಐದು ಬಾರಿ ಪ್ರದಕ್ಷಿಣೆ ಹಾಕಿದರೆ ಜನರು ಅವರ ಪಾಪಗಳನ್ನು ಕ್ಷಮಿಸಬಹುದು ಎಂದು ವ್ಯಂಗ್ಯ ಮಾಡಿದರು.

2013 ರಿಂದ ಸಿದ್ದರಾಮಯ್ಯ ಅವರ ಸಚಿವಸಂಪುಟದಲ್ಲಿ ಕೆಲಸ ಮಾಡುತ್ತಿದ್ದೇನೆ. ಇಷ್ಟು ದಿನಗಳ ಕಾಲ ಅವರನ್ನು ನೋಡಿದ್ಧೇನೆ. ಅವರು ಯಾವುದೇ ಕಾರಣಕ್ಕೂ ಭ್ರಷ್ಟರಾಗಲು ಸಾಧ್ಯವೇ ಇಲ್ಲ. ಅವರಷ್ಟು ಜನಪರವಾಗಿ ಯೋಚನೆ ಮಾಡುವ ವ್ಯಕ್ತಿಯನ್ನು ನಾನು ನೋಡಿಲ್ಲ. ಯಾವುದೇ ಕಾರಣಕ್ಕೂ ಕಾನೂನು ಬಿಟ್ಟು ಕೆಲಸ ಮಾಡುವವರಲ್ಲ. ಆಡಳಿತದಲ್ಲಿ ಕಪ್ಪುಚುಕ್ಕೆಯಿಲ್ಲದ ವ್ಯಕ್ತಿ. ಸಿದ್ದರಾಮಯ್ಯ ಅವರ ಪತ್ನಿಗೆ ಅಣ್ಣನಿಂದ ಉಡುಗೊರೆ ಬಂದರೆ ಇದರಲ್ಲಿ ಮೋಸವೇನಿದೆ. ಇದು ಹಗರಣ ಹೇಗಾಗುತ್ತದೆ. ಬಿಜೆಪಿ ಸರ್ಕಾರ ಇದ್ದಾಗಲೇ ಸೈಟು ಹಂಚಿಕೆ ಮಾಡಿ. ಈಗ ಅವರೇ ಅವರ ವಿರುದ್ದ ಪಾದಯಾತ್ರೆ ಮಾಡುತ್ತಿದ್ದಾರೆ ಎಂದರು.
 

Share this Story:

Follow Webdunia kannada

ಮುಂದಿನ ಸುದ್ದಿ

ನಾನು ಈ ನೆಲದ ಶೋಷಿತರ ಪರ ಇರುವವನು: ಸಿಎಂ ಸಿದ್ದರಾಮಯ್ಯ