Publish Date: Fri, 05 Jun 2020 (18:33 IST)
Updated Date: Fri, 05 Jun 2020 (18:35 IST)
ನಮ್ಮ ಮಗುವಿಗೆ ನಾವೇ ವಿಷವಿಟ್ಟಂತೆ ಆಗಬಾರದು ಎಂದು ರಾಜ್ಯದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ರಾಜ್ ಸಚಿವ ಕೆ.ಎಸ್.ಈಶ್ವರಪ್ಪ ಅವರು ಆತಂಕ ವ್ಯಕ್ತಪಡಿಸಿದ್ದಾರೆ.
ಕೆರೆಗಳಂತಹ ಅಂತರ್ಜಲ ಮೂಲಗಳನ್ನು ರಕ್ಷಿಸದಿದ್ದರೆ, ನಮ್ಮ ಮಗುವಿಗೆ ನಾವೇ ವಿಷವಿಟ್ಟಂತೆ ಎಂದು ರಾಜ್ಯದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ರಾಜ್ ಸಚಿವರಾದ ಕೆ.ಎಸ್.ಈಶ್ವರಪ್ಪ ಅವರು ಆತಂಕ ವ್ಯಕ್ತಪಡಿಸಿದ್ದಾರೆ.
ಕಲಬುರಗಿಯಲ್ಲಿ “ಅಂತರ್ಜಲ ಚೇತನ” ಕಾರ್ಯಕ್ರಮಕ್ಕೆ ಚಾಲನೆ ನೀಡಿ, ಅಂತರ್ಜಲ ರಕ್ಷಣೆ ನಮ್ಮೆಲ್ಲರ ಕರ್ತವ್ಯವಾಗಿದೆ. ಇಡೀ ಸಮಾಜ ಜಾಗೃತವಾದರೆ ಮಾತ್ರ ಇದು ಸಾಧ್ಯವಾಗುತ್ತದೆ ಎಂದರು.
ಹಾಗೆಯೇ ಮುಂದಿನ ಮೂರು ವರ್ಷಗಳಲ್ಲಿ ಪ್ರತಿ ಮನೆಗೂ ಗಂಗೆ ಹರಿಯಲಿದೆ. ಎಲ್ಲಾ ಮನೆಗಳಿಗೂ ನೀರಿನ ಸೌಕರ್ಯ (ಕೊಳಾಯಿ) ಕಲ್ಪಿಸಬೇಕೆಂಬುದು ಇದು ಪ್ರಧಾನಿ ನರೇಂದ್ರ ಮೋದಿ ಅವರ ಕನಸಸಾಗಿದೆ ಎಂದಿದ್ದಾರೆ.