Select Your Language

Notifications

webdunia
webdunia
webdunia
webdunia

ಹಳದಿ ಇದ್ದದ್ದನ್ನು ಗ್ರೀನ್ ಝೋನ್ ಮಾಡುವೆ ಎಂದ ಸಚಿವ

ಹಳದಿ ಇದ್ದದ್ದನ್ನು ಗ್ರೀನ್ ಝೋನ್ ಮಾಡುವೆ ಎಂದ ಸಚಿವ
ದಾವಣಗೆರೆ , ಸೋಮವಾರ, 27 ಏಪ್ರಿಲ್ 2020 (19:17 IST)
ಹಳದಿ ಝೋನ್ ನಲ್ಲಿರುವ ಜಿಲ್ಲೆಯನ್ನು ಇನ್ಮುಂದೆ ಗ್ರೀನ್ ಝೋನ್ ಮಾಡಲಾಗುತ್ತದೆ. ಅದಕ್ಕಾಗಿ ಕೇಂದ್ರ ಸರಕಾರದ ಮೇಲೆ ಒತ್ತಡ ಹಾಕುವೆ ಎಂದು ಸಚಿವರೊಬ್ಬರು ಹೇಳಿದ್ದಾರೆ.

ಕಳೆದ 28 ದಿನಗಳಿಂದ ದಾವಣಗೆರೆ ಜಿಲ್ಲೆಯಲ್ಲಿ ಹೊಸ ಕೊರೋನಾ ಪ್ರಕರಣ ಪತ್ತೆ ಆಗಿಲ್ಲ. ಈ ಹಿನ್ನೆಲೆಯಲ್ಲಿ ಜಿಲ್ಲೆಯನ್ನು ಈಗಿರುವ ಹಳದಿ ಝೋನ್ ನಿಂದ ಹಸಿರು ಝೋನ್ ಗೆ ಪರಿವರ್ತಿಸಲು ಕೇಂದ್ರ ಸರ್ಕಾರದ ಮೇಲೆ ಒತ್ತಡ ತರುವುದಾಗಿ ಜಿಲ್ಲಾ ಉಸ್ತುವಾರಿ ಸಚಿವ ಬೈರತಿ ಬಸವರಾಜ್ ತಿಳಿಸಿದ್ದಾರೆ.

ಜಿಲ್ಲೆಯನ್ನು ಹಸಿರು ವಲಯ ಮಾಡುವಂತೆ ವೈದ್ಯಕೀಯ ಇಲಾಖೆ, ಆರೋಗ್ಯ ಇಲಾಖೆ ಹಾಗೂ ಮುಖ್ಯಮಂತ್ರಿ ಮೇಲೆ ಒತ್ತಡ ತರುವ ಕೆಲಸ ಮಾಡುವುದಾಗಿ ಹೇಳಿದರು.

ಜಿಲ್ಲಾ ಚಿಗಟೇರಿ ಆಸ್ಪತ್ರೆಯಲ್ಲಿ ಕೊರೊನಾ ಲ್ಯಾಬ್ ಆರಂಭವಾಗಬೇಕಿತ್ತು. ಆದರೆ, ತಾಂತ್ರಿಕ ಕಾರಣಗಳಿಂದಾಗಿ ವಿಳಂಬವಾಗಿದೆ. ಜಿಲ್ಲಾಧಿಕಾರಿಗಳು ಈ ಘಟಕಕ್ಕೆ 90 ಲಕ್ಷ ರೂ. ಮಂಜೂರು ಮಾಡಿದ್ದು, ಮೇ 4 ಅಥವಾ 5 ರ ವೇಳೆಗೆ ಉದ್ಘಾಟನೆ ಆಗಲಿದೆ ಎಂದರು.  




Share this Story:

Follow Webdunia kannada

ಮುಂದಿನ ಸುದ್ದಿ

ನಿಮ್ಮ ಮೂರು ತಿಂಗಳ ಪಿಎಫ್ ಹಣ : ಕೇಂದ್ರ ಸರಕಾರವೇ ಕೊಡುತ್ತದೆ