Select Your Language

Notifications

webdunia
webdunia
webdunia
webdunia

ಮುಸ್ಲಿಂ ಧರ್ಮ ಶ್ರೇಷ್ಠ ಎಂದಿದ್ದ ಬಸವರಾಜ ರಾಯರೆಡ್ಡಿ ಉಲ್ಟಾ: ಈಗ ಈ ತತ್ವವೇ ಗ್ರೇಟ್ ಎಂದ ಸಚಿವ

Basavaraja Rayareddy
ಬೆಂಗಳೂರು: ನಿನ್ನೆಯಷ್ಟೇ ಕಾರ್ಯಕ್ರಮವೊಂದರಲ್ಲಿ ಸಚಿವ ಬಸವರಾಜ ರಾಯರೆಡ್ಡಿ ಮುಸ್ಲಿಂ ಧರ್ಮ ಎಲ್ಲಕ್ಕಿಂತ ಶ್ರೇಷ್ಠ ಧರ್ಮ, ನನಗೂ ಹಜ್ ಯಾತ್ರೆಗೆ ಹೋಗಲು ಆಸೆಯಿದೆ ಎಂದು ಹೇಳಿದ್ದರು. ಆದರೆ ಇದೀಗ ತಮ್ಮ ಹೇಳಿಕೆಯಿಂದ ಉಲ್ಟಾ ಹೊಡೆದಿದ್ದಾರೆ.

ಮುಸ್ಲಿಂ ಸಮುದಾಯದ ಸಾಮೂಹಿಕ ವಿವಾಹ ಕಾರ್ಯಕ್ರಮವೊಂದರಲ್ಲಿ ಭಾಗಿಯಾಗಿದ್ದ ಸಚಿವರು ಮುಸ್ಲಿಂ ಧರ್ಮ ಶ್ರೇಷ್ಠ ಧರ್ಮ. ಆದರೆ ಈ ಧರ್ಮದ ಬಗ್‍ಗೆ ತಪ್ಪು ಹರಡಲಾಗಿದೆ. ನನಗೂ ಹಜ್ ಯಾತ್ರೆಗೆ ಹೋಗುವ ಆಸೆಯಿದೆ ಎಂದಿದ್ದರು.

ಅವರ ಹೇಳಿಕೆ ಕೆಲವರ ಟೀಕೆಗೆ ಗುರಿಯಾಗಿತ್ತು. ಈ ಹಿಂದೆ ನಾನು ದೇವಸ್ಥಾನಕ್ಕೆ ಹೋಗಲ್ಲ, ಬಸವ ತತ್ವವೇ ಶ್ರೇಷ್ಠ ಎಂದಿದ್ದ ಬಸವರಾಜ ರಾಯರೆಡ್ಡಿ ಈಗ ಉಲ್ಟಾ ಹೊಡೆದಿದ್ದೇಕೆ ಎಂದು ಟೀಕೆ ಮಾಡಲಾಗಿತ್ತು. ಇದರ ಬೆನ್ನಲ್ಲೇ ಈಗ ಅವರು ತಮ್ಮ ಹೇಳಿಕೆ ಬದಲಾಯಿಸಿದ್ದಾರೆ.

‘ನಾನು ಯಾವುದೇ ಧರ್ಮವನ್ನು ಕಡಿಮೆ ಎಂದು ಹೇಳಿಲ್ಲ. ಮುಸ್ಲಿಂ ಧರ್ಮದಲ್ಲಿರುವ ಒಳ್ಳೆಯ ವಿಚಾರಗಳನ್ನು ಹೇಳಿದ್ದೇನೆ. ಎಲ್ಲಾ ಧರ್ಮಗಳೂ ಶ್ರೇಷ್ಠ, ಇಸ್ಲಾಂ ಧರ್ಮದಲ್ಲೂ ಶ್ರೇಷ್ಠ ವಿಚಾರವಿದೆ’ ಎಂದಿದ್ದಾರೆ.

ಬಸವಣ್ಣನ ತತ್ವವನ್ನು ಉಲ್ಲೇಖಿಸಿದ ಅವರು ಕಲಬೇಡ ಕೊಲಬೇಡ, ಹುಸಿಯ ನುಡಿಯಲು ಬೇಡ ಎಂಬ ಶರಣ ತತ್ವ ಶ್ರೇಷ್ಠವಾದುದು ಎಂದಿದ್ದಾರೆ. ಹಿಂದೂ ಧರ್ಮ ಸೇರಿದಂತೆ ಎಲ್ಲಾ ಧರ್ಮಗಳ ಇತಿಹಾಸ ಮತ್ತು ವಿಚಾರಧಾರೆಗಳ ಅಧ್ಯಯನ ಮಾಡುತ್ತಿರುವುದಾಗಿ ಹೇಳಿದ್ದಾರೆ.


Share this Story:

Follow Webdunia kannada

ಮುಂದಿನ ಸುದ್ದಿ

ಜಂತರ್ ಮಂತರ್ ನಲ್ಲಿ ನಾಲಿಗೆ ಹರಿಬಿಟ್ಟು ಕ್ಷಮೆಯಾಚಿಸಿದ್ದ ರುಚಿಕಾ ಸಿಂಗ್ ಮತ್ತೆ ಪ್ರಧಾನಿ ಮೋದಿಗೆ ಹೇಡಿ ಎಂದು ಟೀಕೆ Video