Select Your Language

Notifications

webdunia
webdunia
webdunia
webdunia

ಬಿಬಿಎಂಪಿ ಮೇಯರ್ ಆಯ್ಕೆ; ಬಿಜೆಪಿಯಲ್ಲಿ ಭುಗಿಲೆದ್ದ ಭಿನ್ನಮತ

ಬಿಬಿಎಂಪಿ ಮೇಯರ್ ಆಯ್ಕೆ; ಬಿಜೆಪಿಯಲ್ಲಿ ಭುಗಿಲೆದ್ದ ಭಿನ್ನಮತ
ಬೆಂಗಳೂರು , ಶುಕ್ರವಾರ, 27 ಸೆಪ್ಟಂಬರ್ 2019 (10:54 IST)
ಬೆಂಗಳೂರು : ಬಿಬಿಎಂಪಿ ಮೇಯರ್ ಅಭ್ಯರ್ಥಿ ಬಗ್ಗೆ ಪಕ್ಷದಿಂದಲೇ ತೀರ್ಮಾನವಾಗುವ ಹಿನ್ನಲೆಯಲ್ಲಿ ಇದೀಗ ಬಿಬಿಎಂಪಿ ಮೇಯರ್ ಆಯ್ಕೆ ಬಿಜೆಪಿಗೆ ಕಗ್ಗಂಟಾಗಿ ಪರಿಣಮಿಸಿದೆ.




ಬಿಬಿಎಂಪಿ ಮೇಯರ್ ಅಭ್ಯರ್ಥಿ ಬಗ್ಗೆ ಪಕ್ಷದಿಂದಲೇ ತೀರ್ಮಾನವಾಗುವುದರಿಂದ ತಮ್ಮ ತಮ್ಮ ಕ್ಷೇತ್ರದ ಕಾರ್ಪೋರೇಟರ್ ಗಳನ್ನು ಬೆಂಬಲಿಸುವ ಮೂಲಕ ಬಿಜೆಪಿ ಶಾಸಕರ ನಡುವೆ ಭಿನ್ನಮತ ಭುಗಿಲೇಳುವ ಸಾಧ್ಯತೆ ಇದೆ ಎನ್ನಲಾಗಿದೆ.


ಮಂಜುನಾಥ್ ರಾಜು, ಶ್ರೀನಿವಾಸ್, ಪದ್ಮನಾಭ ರೆಡ್ಡಿ ಮೇಯರ್ ರೇಸ್ ನಲ್ಲಿ  ಮೂವರು ಕಾರ್ಪೊರೇಟರ್ ಗಳಾಗಿದ್ದು, ಪದ್ಮನಾಭ ರೆಡ್ಡಿ ಪರ ರೆಡ್ಡಿ ಸಮುದಾಯದ ಶಾಸಕರು ನಿಂತರೆ, ಶ್ರೀನಿವಾಸ್ ಬೆನ್ನಿಗೆ ಸಚಿ ಆರ್ ಅಶೋಕ್ ನಿಂತಿದ್ದಾರೆ. ಹಾಗೇ  ಮಂಜುನಾಥ್ ರಾಜು ಪರ ಡಿಸಿಎಂ ಅಶ್ವತ್ಥ್ ನಿಂತಿದ್ದಾರೆ.


ಹೀಗಾಗಿ ಭಿನ್ನಮಯಕ್ಕೆ ಅವಕಾಶ ಕೊಡದೆ ಆಯ್ಕೆಗೆ ಕಸರತ್ತು ನಡೆಸಿದ ಸರ್ಕಾರ ಸೆ 30ರವರೆಗೂ ಹೆಸರು ಫೈನಲ್ ಮಾಡದಿರಲು ತೀರ್ಮಾನಿಸಿದೆ. ಹಾಗೇ ಅ.1ರ ಹಿಂದಿನ ದಿನ ರಾತ್ರಿ ಹೆಸರು ಘೋಷಿಸುವ ಸಾಧ್ಯತೆ ಇದೆ ಎನ್ನಲಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಮಹಿಷಾ ದಸರಾ ಆಚರಣೆಗೆ ಶಾಮಿಯಾನ ಹಾಕಿದ್ದಕ್ಕೆ ಸಂಸದ ಪ್ರತಾಪ್ ಸಿಂಹ ಗರಂ