Select Your Language

Notifications

webdunia
webdunia
webdunia
webdunia

ಸಂತ್ರಸ್ತರ ಕೇಂದ್ರದಲ್ಲಿ ಸರಕಾರಿ ನೌಕರರ ಭಾರೀ ಕಿತ್ತಾಟ

ಸಂತ್ರಸ್ತರ ಕೇಂದ್ರದಲ್ಲಿ ಸರಕಾರಿ ನೌಕರರ ಭಾರೀ ಕಿತ್ತಾಟ
ಚಿಕ್ಕೋಡಿ , ಶನಿವಾರ, 17 ಆಗಸ್ಟ್ 2019 (16:57 IST)
ಪ್ರವಾಹ ಪೀಡಿತರಿಗೆ ನೆರವಾಗಿರೋ ಸಂತ್ರಸ್ತರ ಕೇಂದ್ರದಲ್ಲಿ ಪಂಚಾಯಿತಿ ಸಿಬ್ಬಂದಿ ಹಾಗೂ ಶಾಲೆಯ ಸಿಬ್ಬಂದಿ ಕಿತ್ತಾಡಿಕೊಂಡಿದ್ದಾರೆ.

ಕ್ಷುಲ್ಲಕ ಕಾರಣಕ್ಕೆ ಶಾಲಾ ಸಿಬ್ಬಂದಿ ಹಾಗೂ ಗ್ರಾಮ ಪಂಚಾಯತಿ ಸಿಬ್ಬಂದಿ ನಡುವೆ ಗಲಾಟೆ ನಡೆದಿದೆ.

ಕೇರೂರ ಗ್ರಾಮದ  ಸರ್ಕಾರಿ ಶಾಲೆಯ ಸಂತ್ರಸ್ತರ ಕೇಂದ್ರದಲ್ಲಿ ಈ ಘಟನೆ ನಡೆದಿದೆ.

ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಕೇರೂರ ಗ್ರಾಮದಲ್ಲಿ ಸಂತ್ರಸ್ತರಿಗೆ ಚೆಕ್ ವಿತರಣೆ ಮಾಡುವ ಕಾರ್ಯಕ್ರಮದಲ್ಲಿ ಗಲಾಟೆ ನಡೆದಿದೆ.

ಕಾರ್ಯಕ್ರಮಕ್ಕೆ ಬಳಸಿದ ಕುರ್ಚಿ, ಟೇಬಲ್ ತೆಗೆಯುವ ವಿಚಾರದಲ್ಲಿ ಶಾಲೆ ಸಿಬ್ಬಂದಿ ಮತ್ತು ಪಂಚಾಯಿತಿ ಸಿಬ್ಬಂದಿ ಗಲಾಟೆ ಮಾಡಿಕೊಂಡಿದ್ದಾರೆ.

ಟೇಬಲ್, ಕುರ್ಚಿ ತೆಗೆಯೋದು ನಿಮ್ಮ ಕೆಲಸ ಅಂತ ಪರಸ್ಪರ ಶಾಲಾ ಸಿಬ್ಬಂದಿ ಮತ್ತು ಪಂಚಾಯಿತಿ ಸಿಬ್ಬಂದಿ ಕಿತ್ತಾಡಿಕೊಂಡಿದ್ದಾರೆ.



Share this Story:

Follow Webdunia kannada

ಮುಂದಿನ ಸುದ್ದಿ

ಪ್ರವಾಹಕ್ಕೆ ಸೆಡ್ಡು ಹೊಡೆದವ ಏನಾದ?: ಮಾನವೀಯತೆ ಮರೆತ ಮನಸ್ಸುಗಳು