Webdunia - Bharat's app for daily news and videos

Install App

ಚಾಮರಾಜಪೇಟೆ ಮೈದಾನದಲ್ಲಿ ಸಾಮೂಹಿಕ ಪ್ರಾರ್ಥನೆ

Webdunia
ಶನಿವಾರ, 22 ಏಪ್ರಿಲ್ 2023 (19:40 IST)
​ ಮುಸಲ್ಮಾನರ ಪವಿತ್ರ ಹಬ್ಬ. ಒಂದು ತಿಂಗಳ ಕಾಲ ಉಪವಾಸ ಮಾಡಿ, ಆಚರಿಸೋ ಈ ಹಬ್ಬ, ತ್ಯಾಗ, ಬಲಿದಾನದ ಸಂಕೇತ. ಇಂದು ನಾಡಿನೆಲ್ಲೆಡೆ ಮುಸಲ್ಮಾನ ಭಾಂದವರು ರಂಜಾನ್​ ಹಬ್ಬ ಆಚರಿಸಿ ಸಂಭ್ರಮಿಸಿದ್ರು. ಒಂದೆಡೆ ಬಿಳಿ ಬಣ್ಣದ ಬಟ್ಟೆ ಧರಿಸಿ ಸಾಲಾಗಿ ಕುಳಿತ ಜನರು, ಮತ್ತೊಂದೆಡೆ ಹಬ್ಬದ ಖುಷಿಯಲ್ಲಿ ಹೊಸ ಬಟ್ಟೆಗಳನ್ನ ಧರಿಸಿ ಅಪ್ಪನ ತೋಳುಗಳಲ್ಲಿ ನಗುತ್ತಾ ನಮಾಜ್​ಗೆ ಆಗಮಿಸಿದ್ದ ಪುಟಾಣಿ ಮಕ್ಕಳು, ಚಾಮರಾಜಪೇಟೆ ಮೈದಾನದಲ್ಲಿ ನಡೆದ ರಂಜಾನ್​ ಸಾಮೂಹಿಕ ಪ್ರಾರ್ಥನೆಯಲ್ಲಿ ಕಂಡುಬಂದ ದೃಶ್ಯಗಳಿವು.ಕಳೆದ ಒಂದು ತಿಂಗಳಿನಿಂದ ರೋಜ ಅಂದ್ರೆ ಉಪವಾಸ ಮಾಡಿದ್ದ ಮುಸಲ್ಮಾನರು, ಇಂದು ಸಾಮೂಹಿಕ ಪ್ರಾರ್ಥನೆ ಸಲ್ಲಿಸೋ ಮೂಲಕ ರಂಜಾನ್​ ಆಚರಿಸಿದ್ರು.ಚಾಮರಾಜಪೇಟೆ ಮೈದಾನದಲ್ಲಿ ಸೇರಿದ ಸಾವಿರಾರು ಜನರು ಅಲ್ಲಾನ ಪ್ರಾರ್ಥಿಸೋ ಮೂಲಕ ಹಬ್ಬ ಆಚರಿಸಿದ್ರು.

ಇನ್ನು ವಾಸ್ತವವಾಗಿ ಅರಬ್ ದೇಶಗಳಲ್ಲಿ ರಂಜಾನ್ ಹಬ್ಬದ ಆಚರಣೆಯ ಮೊದಲು ಚಂದ್ರ ಗೋಚರಿಸುತ್ತದೆ. ಅರಬ್ ದೇಶಗಳಲ್ಲಿ ಈದ್ ಆಚರಿಸಿದ ಒಂದು ದಿನದ ನಂತರ ಭಾರತದಲ್ಲಿ ರಂಜಾನ್ಆಚರಿಸಲಾಗುತ್ತದೆ.ರಂಜಾನ್ ದಿನದಂದು ಇಸ್ಲಾಂ ಧರ್ಮವನ್ನ ನಂಬುವ ಎಲ್ಲಾ ಜನರು ಸಾಮೂಹಿಕವಾಗಿ ಪ್ರಾರ್ಥನೆ ಸಲ್ಲಿಸ್ತಾರೆ.ಅದರಂತೆ ಇಂದು ಪ್ರಾರ್ಥನೆ ಸಲ್ಲಿಸಿದ ಧರ್ಮಗುರುಗಳು, ನಾಡಿನ ಜನರೆಲ್ಲರೂ ಒಂದೇ, ಹಿಂದೂ-ಮುಸ್ಲಿಂ ಬೇಧ-ಬಾವ ಇಲ್ಲದೇ ಎಲ್ಲರೂ ಒಗ್ಗಟ್ಟಾಗಿರಬೇಕು ಅಂತಾ ಸಂದೇಶ ನೀಡಿದ್ರು. 

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಎಲ್ಲವನ್ನೂ ನೋಡು

ತಾಜಾ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments