Select Your Language

Notifications

webdunia
webdunia
webdunia
webdunia

ಚುನಾವಣೆ ಬಹಿಷ್ಕರಿಸಿದ ಗೌಡಹಳ್ಳಿ ಗ್ರಾಮಸ್ಥರು

ಚುನಾವಣೆ ಬಹಿಷ್ಕರಿಸಿದ ಗೌಡಹಳ್ಳಿ ಗ್ರಾಮಸ್ಥರು
ಮಂಡ್ಯ , ಶನಿವಾರ, 22 ಏಪ್ರಿಲ್ 2023 (17:30 IST)
ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಗೌಡಹಳ್ಳಿ ಗ್ರಾಮಸ್ಥರು ಮತದಾನ ಬಹಿಷ್ಕಾರಕ್ಕೆ ತೀರ್ಮಾನ ಮಾಡಿದ್ದಾರೆ.. ಗೌಡಹಳ್ಳಿ ಗ್ರಾಮದ ಮೂಲಕ ಮೈಸೂರು- ಬೆಂಗಳೂರು ದಶಪಥ ಹೆದ್ದಾರಿ ಹಾದು ಹೋಗಿದ್ದು, ಹೆದ್ದಾರಿಗೆ ಅಂಡರ್​ ಪಾಸ್​​​ ನಿರ್ಮಿಸದ ಹಿನ್ನೆಲೆ ಗ್ರಾಮಸ್ಥರು ಮತದಾನ ಬಹಿಷ್ಕಾರಕ್ಕೆ ನಿರ್ಧರಿಸಿದ್ದಾರೆ.. ಹೆದ್ದಾರಿಯಲ್ಲಿ ಅಂಡರ್ ಪಾಸ್ ಸೇತುವೆಯಿಲ್ಲದೇ ಗ್ರಾಮಸ್ಥರು ರಸ್ತೆ ದಾಟಲು ಕಿಲೋ ಮೀಟರ್​ಗಟ್ಟಲೆ ದೂರ ಸುತ್ತಿ ಬರಬೇಕಾಗಿದೆ. ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಗ್ರಾಮಸ್ಥರ ಮನವಿಗೆ ಸರಿಯಾಗಿ ಸ್ಪಂದಿಸಿಲ್ಲ..ಈ ಹಿನ್ನೆಲೆಯಲ್ಲಿ ಮತದಾನ ಬಹಿಷ್ಕಾರಕ್ಕೆ ನಿರ್ಧರಿಸಲಾಗಿದೆ.. ಕೆಲಸ ಆಗದ ಹೊರತು ಜನಪ್ರತಿನಿಧಿಗಳು ಗ್ರಾಮಕ್ಕೆ ವೋಟು ಕೇಳಲು ಬಾರದಂತೆ ಗ್ರಾಮಸ್ಥರು ಆಗ್ರಹಿಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಸಾಹುಕಾರ್​​ ಆಸ್ತಿ 72.25 ಕೋಟಿ ರೂ. ಕುಸಿತ