Publish Date: Mon, 09 Apr 2018 (11:43 IST)
Updated Date: Mon, 09 Apr 2018 (11:45 IST)
ಮಂಡ್ಯ: ಶಾಸಕ ರೆಬಲ್ ಸ್ಟಾರ್ ಅಂಬರೀಷ್ ವಿರುದ್ಧ ಮಂಡ್ಯ ಕಾಂಗ್ರೆಸ್ ನಲ್ಲೇ ಅಪಸ್ವರ ಕೇಳಿಬಂದಿದೆ. ಕೆಬ್ಬಳ್ಳಿ ಆನಂದ್ ಅಂಬಿ ವಿರುದ್ಧ ಸಿಡಿದೆದ್ದಿದ್ದಾರೆ.
ಶಾಸಕರಾದ ಮೇಲೆ ಮಂಡ್ಯ ಕ್ಷೇತ್ರದ ಕಡೆಗೆ ಅಂಬರೀಷ್ ತಲೆಯೇ ಹಾಕಿಲ್ಲ. ಇದೀಗ ಅಂಬರೀಷ್ ಕೆಪಿಸಿಸಿ ಮತ್ತು ಹೈಕಮಾಂಡ್ ಗೆ ಬ್ಲ್ಯಾಕ್ ಮೇಲ್ ಮಾಡುತ್ತಿದ್ದಾರೆ. ಅವರಿಗೆ ಮಂಡ್ಯ ಟಿಕೆಟ್ ಕೊಟ್ಟರೆ ಸುಮ್ಮನಿರಲ್ಲ ಎಂದು ಆನಂದ್ ಬೆದರಿಕೆ ಹಾಕಿದ್ದಾರೆ.
ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಪ್ರಚಾರ ಮಾಡುವುದಾಗಿ ಅಂಬಿ ಬ್ಲ್ಯಾಕ್ ಮೇಲ್ ಮಾಡುತ್ತಿದ್ದಾರೆ. ಶಾಸಕರಾದ ಮೇಲೆ ಒಮ್ಮೆಯೂ ಇಲ್ಲಿನ ಜನರ ಸಮಸ್ಯೆ ಕೇಳಲು ಬಂದಿಲ್ಲ. ಹೀಗಾಗಿ ಒಂದು ವೇಳೆ ಅಂಬರೀಷ್ ಗೆ ಮಂಡ್ಯ ಟಿಕೆಟ್ ಕೊಟ್ಟರೆ ಬಂಡಾಯ ಅಭ್ಯರ್ಥಿಯನ್ನು ಕಣಕ್ಕಿಳಿಸುವುದಾಗಿ ಆನಂದ್ ಎಚ್ಚರಿಸಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.