Select Your Language

Notifications

webdunia
webdunia
webdunia
webdunia

ಲೈನ್ ಮ್ಯಾನ್ ಮೇಲೆ ಪೋಸ್ಟ್ ಮ್ಯಾನ್ ಹಲ್ಲೆ ನಡೆಸಿದ್ಯಾಕೆ? ಶಾಕಿಂಗ್

ಲೈನ್ ಮ್ಯಾನ್ ಮೇಲೆ ಪೋಸ್ಟ್ ಮ್ಯಾನ್ ಹಲ್ಲೆ ನಡೆಸಿದ್ಯಾಕೆ? ಶಾಕಿಂಗ್
ಚಿಕ್ಕಬಳ್ಳಾಪುರ , ಗುರುವಾರ, 6 ಜೂನ್ 2019 (18:09 IST)
ಪೋಸ್ಟ್ ಮ್ಯಾನ್ ವೊಬ್ಬರು ಲೈನ್ ಮ್ಯಾನ್ ಮೇಲೆ ಹಲ್ಲೆ ನಡೆಸಿದ ಘಟನೆ ನಡೆದಿದೆ.

ಲೈನ್ ಮ್ಯಾನ್ ಮೇಲೆ ಹಲ್ಲೆ ನಡೆಸಿದ್ದಾನೆ ಗ್ರಾಮಸ್ಥ. ಲೈನ್ ಮ್ಯಾನ್ ಭರತ್ ಹಲ್ಲೆಗೊಳಗಾದ ಸಿಬ್ಬಂದಿ. ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ತಾಲೂಕು ಕೈವಾರ ಘಟಕಕ್ಕೆ ಸೇರಿದ ಸಿಬ್ಬಂದಿ ಭರತ್.

ಮುಂಜಾನೆ ಕೋಳಿ ಪಾರಂ ಹಾಗೂ ಗ್ರಾಮದಲ್ಲಿ ಜಂಪ್ ಹೋದ ಕಾರಣ ಹಲ್ಲೆ ನಡೆಸಿದ್ದಾನೆ ಗ್ರಾಮಸ್ಥ. ಹಿರೇಕಟ್ಟಿಗೇನಹಳ್ಳಿ ನಿವಾಸಿ ಮಂಜನಾಥ್ ಹಲ್ಲೆನಡೆಸಿದ ಗ್ರಾಮದ ನಿವಾಸಿಯಾಗಿದ್ದಾನೆ. ಈತ ಇದುವರೆಗೂ ಎರಡು ಬಾರಿ ಸರ್ಕಾರಿ ನೌಕರರ ಮೇಲೆ ಹಲ್ಲೆ ನಡೆಸಿದ್ದಾನೆ. ಕಳೆದ 6 ವರ್ಷದ ಹಿಂದೆ ಮತೋರ್ವ ಅಧಿಕಾರಿ ಮೇಲೆ ಹಲ್ಲೆ ನಡೆಸಿದ್ದನು ಮಂಜುನಾಥ್.

ಇದೇ ವಿಷಯವಾಗಿ ಒಂದು ವಾರ ಜೈಲು ಸೇರಿದ್ದ ಮಂಜುನಾಥ್ ಈತ ಹಿರೇಕಟ್ಟಿಗೇನಹಳ್ಳಿಯ ಪೋಸ್ಟ್ ಮ್ಯಾನ್ ಆಗಿದ್ದಾರೆ.
ಒಬ್ಬ ಸರ್ಕಾರಿ ಅಧಿಕಾರಿಯಾಗಿ ಮತ್ತೋರ್ವ ಅಧಿಕಾರಿ ಮೇಲೆ ನಡೆಸಿದ ಹಲ್ಲೆ ಖಂಡಿಸಿ ಸಹ ಉದ್ಯೋಗಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸದ್ಯ ಚಿಂತಾಮಣಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಲೈನ್ ಮ್ಯಾನ್ ಭರತ್.  

 

Share this Story:

Follow Webdunia kannada

ಮುಂದಿನ ಸುದ್ದಿ

ಅಂಗನವಾಡಿ ಕಾರ್ಯಕರ್ತೆ ಇಂಥಾ ಕೆಲಸ ಮಾಡೋದಾ?