Publish Date: Mon, 24 Jan 2022 (09:00 IST)
Updated Date: Mon, 24 Jan 2022 (09:13 IST)
ಚಿಕ್ಕಬಳ್ಳಾಪುರ: ಸ್ನೇಹಿತ ತನ್ನ ಹೆಂಡತಿ ಜೊತೆ ವ್ಯಾಟ್ಸಪ್ ನಲ್ಲಿ ಚ್ಯಾಟ್ ಮಾಡುತ್ತಿದ್ದಾನೆ ಮತ್ತು ಅಕ್ರಮ ಸಂಬಂಧ ಹೊಂದಿದ್ದಾನೆ ಎಂದು ಅನುಮಾನಿಸಿ ಕೊಲೆ ಮಾಡಿರುವ ಘಟನೆ ಗೌರಿಬಿದನೂರು ತಾಲೂಕಿನಲ್ಲಿ ನಡೆದಿದೆ.
30 ವರ್ಷದ ಶಂಕರ್ ವ್ಯಕ್ತಿ ಕೊಲೆಗೀಡಾದಾತ. ಈತನನ್ನು ಸ್ನೇಹಿತ ಅಶೋಕ್, ಚಂದ್ರು ಎಂಬವರು ಸೇರಿಕೊಂಡು ಕೊಲೆ ಮಾಡಿದ್ದಾರೆ.
ಅಶೋಕ್ ಗೆ ತನ್ನ ಪತ್ನಿ ಜೊತೆ ಶಂಕರ್ ವ್ಯಾಟ್ಸಪ್ ನಲ್ಲಿ ಚ್ಯಾಟ್ ಮಾಡುತ್ತಿದ್ದಾನೆ ಎಂದು ಅನುಮಾನವಿತ್ತು. ಈ ಕಾರಣಕ್ಕೆ ತನ್ನ ಇನ್ನೊಬ್ಬ ಸ್ನೇಹಿತನ ಸಹಾಯ ಪಡೆದು ಶಂಕರ್ ನನ್ನು ಊರ ಹೊರಗೆ ಕರೆದುಕೊಂಡು ಹೋಗಿ ಕೊಲೆ ಮಾಡಿದ್ದಾನೆ. ಬಳಿಕ ಮೃತದೇಹವನ್ನು ಸುಟ್ಟು ಹಾಕಿದ್ದಾರೆ. ಬಳಿಕ ಭಯದಿಂದ ತಾವೇ ಪೊಲೀಸರಿಗೆ ಶರಣಾಗುತ್ತಾರೆ.