Webdunia - Bharat's app for daily news and videos

Install App

ಬ್ರೇಕ್‌ಫಸ್ಟ್‌ಗೆ ಹುಣಸೆಹಣ್ಣಿನ ಚಿತ್ರಾನ್ನ ಮಾಡಿ

Webdunia
ಶುಕ್ರವಾರ, 13 ಮೇ 2022 (09:39 IST)
ದಕ್ಷಿಣ ಭಾರತದ ಸಾಂಪ್ರದಾಯಿಕ ತಿಂಡಿಯಲ್ಲಿ ಚಿತ್ರಾನ್ನ ಒಂದಾಗಿದೆ.

ಇದನ್ನು ಸಾಮಾನ್ಯವಾಗಿ ಕನ್ನಡದಲ್ಲಿ ಹುಳಿ ಅನ್ನ ಅಥವಾ ಹುಣಸೆ ಹುಳಿ ಚಿತ್ರಾನ್ನ ಎಂದೂ ಕರೆಯುತ್ತಾರೆ. ಬೇಗ ಮತ್ತು ರುಚಿಕರವಾಗಿ ಮಾಡುವ ತಿಂಡಿ ಎಂದರೇ ಚಿತ್ರಾನ್ನ.
ಅದರಲ್ಲಿಯೂ ಹುಣಸೆ ಹಣ್ಣಿನಿಂದ ಮಾಡುವ ಚಿತ್ರಾನ್ನ ಎಂದರೇ ಎಲ್ಲರಿಗೂ ಇಷ್ಟ. ಈ ಚಿತ್ರಾನ್ನ ಮಾಡುವ ಸರಳ ವಿಧಾನ ಇದಾಗಿದೆ.

ಬೇಕಾಗಿರುವ ವಿಧಾನ

* ಬೇಯಿಸಿದ ಅನ್ನ – 2 ಬಟ್ಟಲು
* ಕತ್ತರಿಸಿದ ಈರುಳ್ಳಿ – 1 ದೊಡ್ಡ
* ಕೆಂಪು ಮೆಣಸಿನಕಾಯಿಗಳು – 4
* ಸಾಸಿವೆ ಬೀಜಗಳು – 1 ಟೀಸ್ಪೂನ್
* ಕಡಲೆಕಾಳು ಮತ್ತು ಉದ್ದಿನ ಬೇಳೆ – 2 ಟೀಸ್ಪೂನ್
* ಕಡಲೆಕಾಯಿ – 3 ಟೀಸ್ಪೂನ್
* ನೀರಿನಲ್ಲಿ ನೆನೆಸಿಟ್ಟ ಹುಣಸೆಹಣ್ಣು – 1 ಬಟಲು

* ಬೆಲ್ಲ – 1 ಟೀಸ್ಪೂನ್
* ಅರಿಶಿನ ಪುಡಿ – ಳಿ ಟೀಸ್ಪೂನ್
* ಬಿಸೆಬೆಲೆ ಬಾತ್ ಪವರ್ – 4 ಟೀಸ್ಪೂನ್
* ಕೊತ್ತಂಬರಿ ಸೊಪ್ಪು – 1/2 ಕಪ್
* ಎಣ್ಣೆ – 2 ಟೀಸ್ಪೂನ್
* ರುಚಿಗೆ ತಕ್ಕಷ್ಟು ಉಪ್ಪು
* ಕರಿಬೇವಿನ ಎಲೆಗಳು ಸ್ವಲ್ಪ
ಮಾಡುವ ವಿಧಾನ

* ಹುಣಸೆಹಣ್ಣಿನ ರಸವನ್ನು ಬಿಸಿ ನೀರಿನಲ್ಲಿ ನೆನೆಸಿ, ರಸವನ್ನು ಹೊರತೆಗೆಯಿರಿ
* ಬಾಣಲಿಯಲ್ಲಿ ಎಣ್ಣೆಯನ್ನು ಬಿಸಿ ಮಾಡಿ, ಕಡಲೆಕಾಯಿಯನ್ನು ಸೇರಿಸಿ ಗೋಲ್ಡನ್ ಬ್ರೌನ್ ಬರುವವರೆಗೂ ಫ್ರೈ ಮಾಡಿ. ನಂತರ ಕರಿದ ಕಡಲೆಕಾಯಿಯನ್ನು ಎಣ್ಣೆಯಿಂದ ತೆಗೆದು ಬೇರೆ ಬಟಲಿಗೆ ಹಾಕಿ.
* ಮತ್ತೆ ಬಿಸಿಯಿರುವ ಎಣ್ಣೆಗೆ ಸಾಸಿವೆ ಹಾಕಿ. ಅದಕ್ಕೆ ಕಡಲೆಕಾಳು ಮತ್ತು ಉದ್ದಿನ ಬೇಳೆಯನ್ನು ಸೇರಿಸಿ. ಇವೆರೆಡು ಕಂದು ಬಣ್ಣ ಬರುವವರೆಗೆ ಫ್ರೈ ಮಾಡಿ.

* ಕರಿಬೇವಿನ ಎಲೆಗಳು ಮತ್ತು ಒಣ ಕೆಂಪು ಮೆಣಸಿನಕಾಯಿಗಳನ್ನು ಸೇರಿಸಿ, 2 ನಿಮಿಷ ಕಾಲ ಹುರಿಯಿರಿ. ಅದಕ್ಕೆ ಕತ್ತರಿಸಿದ ಈರುಳ್ಳಿ ಸೇರಿಸಿ ಫ್ರೈ ಮಾಡಿ. ಹುಣಸೆಹಣ್ಣಿನ ರಸವನ್ನು ಸೇರಿಸಿ ಮತ್ತು ಅದನ್ನು ಕುದಿಸಿ.

* ನಂತರ ಅದಕ್ಕೆ ಅರಿಶಿನ ಪವರ್, ಉಪ್ಪು, ಬೆಲ್ಲ ಮತ್ತು ಬಿಸಿಬೇಳೆ ಬಾತ್ ಪವರ್ ಸೇರಿಸಿ. ಎಲ್ಲವನ್ನೂ ಚೆನ್ನಾಗಿ ಮಿಶ್ರಣ ಮಾಡಿ ಮತ್ತು ಎಣ್ಣೆ ಬೇರ್ಪಡುವವರೆಗೆ ಹುರಿಯಿರಿ.

* ಹುಣಸೆ ಹುಳಿ ಚಿತ್ರಾನ್ನದ ಗೊಜ್ಜು ಬೆಂದ ನಂತರ ಅದಕ್ಕೆ ಅನ್ನವನ್ನು ಸೇರಿಸಿ ಸರಿಯಾಗಿ ಮಿಶ್ರಣ ಮಾಡಿ. ಅದರ ಮೇಲೆ ಕಡಲೆಕಾಯಿ ಮತ್ತು ಕೊತ್ತಂಬರಿ ಸೊಪ್ಪ ಹಾಕಿ ಅಲಂಕಾರಿ ಬಡಿಸಿ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

Gold Price today: ಚಿನ್ನದ ದರ ಇಂದು ಎಷ್ಟಾಗಿದೆ ನೋಡಿ

Kerala Rains: ಕಾಸರಗೋಡಿನಲ್ಲಿ ವಿಪರೀತ ಮಳೆ, ಮಧೂರು ದೇವಾಲಯದೊಳಗೇ ನುಗ್ಗಿದ ನೀರು

KSRTC Tour package: ಹೊಸ ಟೂರ್ ಪ್ಯಾಕೇಜ್, ಕಡಿಮೆ ದರದಲ್ಲಿ ಮೂರು ಸ್ಥಳಗಳಿಗೆ ಟೂರ್, ವಿವರ ಇಲ್ಲಿದೆ

ಯುಪಿಎ ಕಾಲದಲ್ಲಿಆರು ಬಾರಿ ಸರ್ಜಿಕಲ್ ಸ್ಟ್ರೈಕ್ ಮಾಡಿದ್ದೆವು ಎಂದ ರಣದೀಪ್ ಸುರ್ಜೇವಾಲಾ

Bantwal Murder: ಮುಸ್ಲಿಮರ ಆಕ್ರೋಶಕ್ಕೆ ಬೆಚ್ಚಿದ ಸರ್ಕಾರ, ರಾಜ್ಯಕ್ಕೆ ಹೊಸ ಹೋಂ ಮಿನಿಸ್ಟರ್ ಬರ್ತಾರಾ

ಮುಂದಿನ ಸುದ್ದಿ
Show comments