Select Your Language

Notifications

webdunia
webdunia
webdunia
webdunia

ಮಹಾರಾಷ್ಟ್ರ- ಬೆಳಗಾವಿಯಲ್ಲಿ ಧಾರಾಕಾರ ಮಳೆ- ನದಿಯ ಒಳಹರಿವು ಹೆಚ್ಚಳ

ಮಹಾರಾಷ್ಟ್ರ- ಬೆಳಗಾವಿಯಲ್ಲಿ ಧಾರಾಕಾರ ಮಳೆ- ನದಿಯ ಒಳಹರಿವು ಹೆಚ್ಚಳ
ಬೆಳಗಾವಿ , ಸೋಮವಾರ, 12 ಸೆಪ್ಟಂಬರ್ 2022 (20:17 IST)
ಮಹಾರಾಷ್ಟ್ರ, ಬೆಳಗಾವಿಯಲ್ಲಿ ಧಾರಾಕಾರ ಮಳೆಯಾಗ್ತಿದ್ದು,ಕೃಷ್ಣಾ, ವೇದಗಂಗಾ,ಧೂದಗಂಗಾ, ಘಟಪ್ರಭಾ,ಮಲಪ್ರಭಾ, ಹಿರಣ್ಯಕೇಶಿ ನದಿಗಳ ಒಳ ಹರಿವು ಹೆಚ್ಚಳವಾಗಿದೆ.
 
ಘಟಪ್ರಭಾ ನದಿ ಒಳ ಹರಿವು ಹೆಚ್ಚಾಗಿದ್ದರಿಂದ ಗೋಕಾಕ,ಮೂಡಲಗಿ ತಾಲೂಕಿನ ಸೇತುವೆಗಳು ಜಲಾವೃತವಾಗಿದೆ.ಹುಕ್ಕೇರಿ- ಯರನಾಳ ಸೇತುವೆ, ಕುರಣಿ - ಕೊಚರಿ, ಸಿಂಗಲಾಪುರ್ ಸೇತುವೆ ಜಲಾವೃತವಾಗಿದ್ದು,ಇನ್ನೂ ವೇದಗಂಗಾ, ಧೂದಗಂಗಾ ನದಿ ಒಳ ಹರಿವು ಹೆಚ್ಚಳವಾಗಿರುವುದರಿಂದನಿಪ್ಪಾಣಿ ತಾಲೂಕಿನ ನಾಲ್ಕು ಕೆಳ ಹಂತದ ಸೇತುವೆಜಲಾವೃತವಾಗಿದೆ.ಅಕ್ಕೋಳ-ಸಿದ್ನಾಳ, ಕುನ್ನೂರ-ಬೋಜವಾಡ, ಕುನ್ನೂರ-ಬೋರಬಾಡ, ಭಿವಶಿ-ಜತ್ರಾಟ ಸೇತುವೆ ಜಲಾವೃತವಾಗಿದ್ದು,ಈ 7 ಸೇತುವೆ ಜಲಾವೃತ ಗೊಂಡಿದ್ದರಿಂದ ವಾಹನ ಸಂಚಾರ ಬಂದ್ ಆಗಿದೆ.ಮುಂಜಾಗೃತ ಕ್ರಮವಾಗಿ ಬ್ಯಾರಿಕೆಡ್ ಹಾಕಿ ಸಂಚಾರವನ್ನ ಪೊಲೀಸರು ಬಂದ್ ಮಾಡಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಒಂದು ತಿಂಗಳಿನಿಂದ ತೇಕಲಹಳ್ಳಿ ಗ್ರಾಮದ ಜನರ ನಿದ್ದೆ ಕೆಡಿಸಿದ ಚಿರತೆ ಸೆರೆ