Select Your Language

Notifications

webdunia
webdunia
webdunia
webdunia

ಮಹಾಲಯ ಅಮವಾಸ್ಯೆ: ವಿಶೇಷ ಪೂಜೆ ಸಲ್ಲಿಸಿದ ಭಕ್ತರು

ಮಹಾಲಯ ಅಮವಾಸ್ಯೆ: ವಿಶೇಷ ಪೂಜೆ ಸಲ್ಲಿಸಿದ ಭಕ್ತರು
ಚಾಮರಾಜನಗರ , ಸೋಮವಾರ, 8 ಅಕ್ಟೋಬರ್ 2018 (18:04 IST)
ಇಂದು ಮಹಾಲಯ ಅಮಾವಾಸ್ಯೆ. ಶಿವ ದೇವಾಲಯಗಳಲ್ಲಿ ಬೆಳಿಗ್ಗೆನಿಂದಲೇ ಪೂಜಾ ಪುನಸ್ಕಾರಗಳು ನಡೆಯುತ್ತಿವೆ. ಗಡಿ ಜಿಲ್ಲೆ ಚಾಮರಾಜನಗರದ ಮಲೈಮಹದೇಶ್ವರ ಬೆಟ್ಟದಲ್ಲಿಯೂ ಅಮವಾಸ್ಯೆಯ ವಿಶೇಷ ಪೂಜೆ ನಡೆಯಿತು.

ತಮಿಳುನಾಡು-ಕರ್ನಾಟಕ ರಾಜ್ಯದ ಗಡಿಯಲ್ಲಿರುವ ಮಹದೇಶ್ವರ ಬೆಟ್ಟಕ್ಕೆ ಸಾವಿರಾರು ಭಕ್ತರು ಮಾದಪ್ಪನಿಗೆ ವಿಶೇಷ ಪೂಜೆ ಸಲ್ಲಿಸಿ, ತಮ್ಮ ಹರಕೆಗಳನ್ನ ಒಪ್ಪಿಸಿದರು.

ಚಾಮರಾಜನಗರ ಜಿಲ್ಲೆಯ ಕಂದಹಳ್ಳಿ ಮಹದೇಶ್ವರ, ಯಡಬೆಟ್ಟದ ಮಾದಪ್ಪ ದೇಗುಲ, ವೀರಭದ್ರೇಶ್ವರ ದೇವಸ್ಥಾನ ಸೇರಿದಂತೆ ಎಲ್ಲ ಶಿವನ ದೇವಾಲಯಗಳಲ್ಲಿ ವಿಶೇಷ ಪೂಜೆ ನಡೆಯಿತು.

ಅಮಾವಾಸ್ಯೆ ದಿನಗಳಲ್ಲಿ ವಿಶೇಷ ಪೂಜೆಗಳು ಇರುವುದರಿಂದ ಜನ ಸೇರುವುದು ಸಾಮಾನ್ಯವಾಗಿರುತ್ತದೆ. ಹಾಗೇಯೇ ಮಹದೇಶ್ವರ ಬೆಟ್ಟ ರಾಜ್ಯದ ಪ್ರತಿಷ್ಠಿತ ದೇವಾಲಯಗಳಲ್ಲಿ ಒಂದಾಗಿದೆ.

ಅಮವಾಸ್ಯೆಯ ಜೊತೆಯಲ್ಲಿ ಪಿತೃಪಕ್ಷವೂ ಇರುವುದರಿಂದ ಎಲ್ಲ ದೇವಾಲಯಗಳಿಗೆ ಭಕ್ತ ಸಾಗರವೇ ಹರಿದು ಬರುತ್ತಿದೆ.  



 

Share this Story:

Follow Webdunia kannada

ಮುಂದಿನ ಸುದ್ದಿ

ಪಿಎಸ್ ಐರನ್ನು ಹೊತ್ತು ಡ್ಯಾನ್ಸ್ ಮಾಡಿದ ಯುವಕರು!