Webdunia - Bharat's app for daily news and videos

Install App

ಮದ್ದೂರಮ್ಮ ದೇವಿ ಜಾತ್ರೆಯಲ್ಲಿ ನೋಡ ನೋಡುತ್ತಿದ್ದಂತೇ ಧರೆಗುರುಳಿದ ತೇರು: ಭಯಾನಕ ವಿಡಿಯೋ

Krishnaveni K
ಸೋಮವಾರ, 24 ಮಾರ್ಚ್ 2025 (11:32 IST)
Photo Credit: X
ಬೆಂಗಳೂರು: ನಗರದ ಆನೇಕಲ್ ತಾಲೂಕು ವ್ಯಾಪ್ತಿಯಲ್ಲಿ ಹುಸ್ಕೂರು ಮದ್ದೂರಮ್ಮ ದೇವಿ ಜಾತ್ರೆಯಲ್ಲಿ ನೋಡು ನೋಡುತ್ತಿದ್ದಂತೇ ಬೃಹತ್ ತೇರು ಬೀಳುವ ದೃಶ್ಯವೊಂದು ವೈರಲ್ ಆಗಿದೆ. ಈ ಘಟನೆಯಲ್ಲಿ ಓರ್ವ ಬಾಲಕಿ ಸಾವನ್ನಪ್ಪಿದ್ದು ಹಲವರಿಗೆ ಗಾಯವಾಗಿದೆ.

ಮಾರ್ಚ್ 22, 23 ರಂದು ಮದ್ದೂರಮ್ಮ ಜಾತ್ರೆಯಿತ್ತು. ಈ ಜಾತ್ರೆಯಲ್ಲಿ ಪ್ರತೀ ವರ್ಷವೂ ಆಕರ್ಷಕ ತೇರು ಎಲ್ಲರ ಗಮನ ಸೆಳೆಯುತ್ತದೆ. ಈ ಬಾರಿಯೂ ಬಣ್ಣ ಬಣ್ಣದ ಆಕರ್ಷಕ ತೇರು ಎಲ್ಲರ ಗಮನ ಸೆಳೆದಿತ್ತು.

ಹಲವರು ಜಾತ್ರೆಯಲ್ಲಿ ಪಾಲ್ಗೊಂಡು ತೇರು ಎಳೆಯುವ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು. ಈ ತೇರು ಸುಮಾರು 20-25 ಅಡಿ ಎತ್ತರವಿರುತ್ತದೆ. ಬಹಳ ಶ್ರಮವಹಿಸಿ ಇದನ್ನು ನಿರ್ಮಿಸಲಾಗುತ್ತದೆ.

ಆದರೆ ಈ ಬಾರಿ ಅದೇನಾಯಿತೋ, ಇದ್ದಕ್ಕಿದ್ದಂತೇ ಮೆರವಣಿಗೆ ವೇಳೆ ತೇರು ಕುಸಿದು ಬಿದ್ದಿದೆ. ಪರಿಣಾಮ ಅಕ್ಕಪಕ್ಕದಲ್ಲಿದ್ದವರ ಮೈಮೇಲೆ ತೇರು ಬಿದ್ದಿದೆ. ಘಟನೆಯಲ್ಲಿ ಗೊಂಬೆ ಮಾರಲೆಂದು ಬಂದಿದ್ದ 12 ವರ್ಷದ ಜ್ಯೋತಿ ಎಂಬ ಬಾಲಕಿ ಮತ್ತು ಲೋಹಿತ್ ಎಂಬ ಯುವಕ ಮೃತಪಟ್ಟಿದ್ದಾರೆ. ಉಳಿದಂತೆ ಹಲವರಿಗೆ ಗಾಯವಾಗಿದೆ. ಈ ಭೀಕರ ದೃಶ್ಯ ಇಲ್ಲಿದೆ ನೋಡಿ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಎಲ್ಲವನ್ನೂ ನೋಡು

ತಾಜಾ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments