Publish Date: Sat, 18 Jun 2022 (19:41 IST)
Updated Date: Sat, 18 Jun 2022 (19:44 IST)
ದ್ವಿತೀಯ ಪಿಯುಸಿ ಫಲಿತಾಂಶದಲ್ಲಿ ಕಡಿಮೆ ಅಂಕ ಬಂದ ಕಾರಣ ನೊಂದ ವಿದ್ಯಾರ್ಥಿನಿಯೊಬ್ಬಳು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಕೊಡಗಿನಲ್ಲಿ ನಡೆದಿದೆ.
ಜಿಲ್ಲೆ ಕುಶಾಲನಗರ ಸಮೀಪರ ಬಸವನಹಳ್ಳಿ ಗ್ರಾಮದ ವಿವೇಕಾನಂದ ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ಸಂಧ್ಯಾ ಎಂಬ ವಿದ್ಯಾರ್ಥಿನಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.
ನಿವೃತ್ತ ನಿವಾಸಿ ಸುಭಾಷ್ ಎಂಬುವವರ ಪುತ್ರಿಯಾದ ಸಂಧ್ಯಾ ಇಂದು ಬೆಳಿಗ್ಗೆ ಫಲಿತಾಂಶವನ್ನು ವೀಕ್ಷಿಸಿದ್ದು ತಾನು ಅಂದುಕೊಂಡದ್ದಕ್ಕಿಂತ ಕಡಿಮೆ ಅಂಕಗಳು ಬಂದ ಕಾರಣ ನೊಂದು ನೇಣುಗಿಬಿಗಿದುಕೊಂಡು ಸಾವಿಗೆ ಶರಣಾಗಿದ್ದಾರೆ. ಈ ಸಂಬಂಧ ಕುಶಾಲನಗರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.