Select Your Language

Notifications

webdunia
webdunia
webdunia
webdunia

HDK ಗಾಳಿಯಲ್ಲಿ ಗುಂಡು ಹಾರಿಸುದನ್ನು ನಿಲ್ಲಿಸಲಿ- ಸಚಿವ ಪ್ರಿಯಾಂಕ್ ಖರ್ಗೆ

HDK ಗಾಳಿಯಲ್ಲಿ ಗುಂಡು ಹಾರಿಸುದನ್ನು ನಿಲ್ಲಿಸಲಿ- ಸಚಿವ ಪ್ರಿಯಾಂಕ್ ಖರ್ಗೆ
bangalore , ಭಾನುವಾರ, 1 ಅಕ್ಟೋಬರ್ 2023 (14:00 IST)
ರಾಜಕಾರಣದಲ್ಲಿ ಸಾಕಷ್ಟು ಅನುಭವಸ್ಥರಾಗಿರುವ ಕುಮಾರಸ್ವಾಮಿ ಗಾಳಿಯಲ್ಲಿ ಗುಂಡು ಹಾರಿಸುವುದನ್ನು ನಿಲ್ಲಿಸಲಿ, ಮಾಡುವ ಆರೋಪಗಳಿಗೆ ಸಾಕ್ಷ್ಯಗಳಿದ್ದರೆ ಅವುಗಳನ್ನು ತನಿಖಾ ಸಂಸ್ಥೆಗಳಿಗೆ ನೀಡಲಿ, ಸರಕಾರ ತನಿಖೆ ಮಾಡಿಸಲು ತಯಾರಿದೆ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ. ಯತಿಂದ್ರ ಸಿದ್ದರಾಮಯ್ಯ ಒಬ್ಬ ಮಾಜಿ ಶಾಸಕನಾಗಿದ್ದಾರೆ ಮತ್ತು ಅವರ ತಂದೆ ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿರುವುದರಿಂದ ಕ್ಷೇತ್ರದ ಜನ ಅವರಲ್ಲಿಗೆ ಹೋಗಿ ದೂರು ದುಮ್ಮಾನಗಳನ್ನು ಹೇಳಿಕೊಳ್ಳುತ್ತಾರೆ. ಸರ್ಕಾರದ ಕೆಲಸಗಳಲ್ಲಿ ಹಸ್ತಕ್ಷೇಪ ಮಾಡುತ್ತಿದ್ದಾರೆಂದು ಯಾವುದಾದರೂ ಮಂತ್ರಿ ದೂರಿದ್ದಾರಾ? ಸುಖಾಸುಮ್ಮನೆ ಪೆನ್ ಡ್ರೈವ್ ಕೈಯಲ್ಲಿ ಹಿಡಿದು ಅಬ್ಬರಿಸಿದರೆ ಪ್ರಯೋಜನವಿಲ್ಲ ಎಂದು ಖರ್ಗೆ ಆಕ್ರೋಷವ್ಯಕ್ತ ಪಡಿಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಹವಾಮಾನ ಇಲಾಖೆಯಿಂದ ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್