Publish Date: Sat, 16 Sep 2023 (16:20 IST)
Updated Date: Sat, 16 Sep 2023 (16:24 IST)
RSS ವಿರುದ್ಧ ಸಚಿವ ಪ್ರಿಯಾಂಕ್ ಖರ್ಗೆ ಆಕ್ರೋಶ ಹೊರಹಾಕಿದ್ದಾರೆ.ಕಲಬುರಗಿಯಲ್ಲಿ ಮಾತನಾಡಿದ ಅವರು, RSS ತತ್ವದಿಂದ ಯಾರು ಉದ್ದಾರ ಆಗಿದ್ದಾರೆ ಹೇಳಿ?. RSSಗೆ ದೇಶ ಭಕ್ತಿಯೂ ಇಲ್ಲ, ದೇಶ ಪ್ರೇಮವೂ ಇಲ್ಲ. ಈ ಹಿಂದೆ ಸರ್ಕಾರದ ಕೆಲವು ಕಚೇರಿಗಳು RSS ಶಾಖೆಗಳಾಗಿದ್ದವು. ಆ ಶಾಖಾ ಪೀಠಗಳನ್ನೆಲ್ಲಾ ಒಂದೊಂದಾಗಿ ಮುಚ್ಚಿಸುತ್ತಿದ್ದೇವೆ. ಯಾವ ಉದ್ದೇಶಕ್ಕೆ ಸರ್ಕಾರಿ ಕಚೇರಿಗಳು ಸ್ಥಾಪನೆ ಆಗಿವೆಯೋ, ಅದೆ ಉದ್ದೇಶದ ಕೆಲಸಗಳು ನಡೆಯಬೇಕು. ಪಿಡಿಓ ಕಚೇರಿ ಹೋಗಿ ಕಾಂಗ್ರೆಸ್ ಕಚೇರಿ ಆದ್ರೆ ಸರಿಯಾಗಿರುತ್ತಾ?. ಎಲ್ಲವೂ ಕಾನೂನು ಬದ್ದವಾಗಿ ನಡೆಯಬೇಕು. ಕಲಬುರಗಿ ಕೇಂದ್ರೀಯ ವಿವಿಯಲ್ಲಿ RSS ಪ್ರಚಾರ ನಡೆಯುತ್ತಿದೆ. ಇದಕ್ಕೆ ನಾನು ಅವಕಾಶ ಕೊಡಲಾರೆ ಅಂತಾ ಆಕ್ರೋಶ ಹೊರಹಾಕಿದ್ದಾರೆ.