Select Your Language

Notifications

webdunia
webdunia
webdunia
webdunia

ಬಿಜೆಪಿ ಶಾಸಕರ ಕ್ಷೇತ್ರಗಳಿಗೆ ಕಡಿಮೆ ಅನುದಾನಕ್ಕೆ ಅಸಮಾಧಾನ

BJP
ಬೆಂಗಳೂರು: ಜಿಬಿಎ ವ್ಯಾಪ್ತಿಯಲ್ಲಿ ಶಾಸಕರ ಅನುದಾನದಲ್ಲಿ ತಾರತಮ್ಯ ಮಾಡಿದ್ದಾರೆ ಎಂದು ಶಾಸಕ ಎಸ್.ರಘು ಅವರು ಆಕ್ಷೇಪಿಸಿದ್ದಾರೆ.
 
ನಗರದಲ್ಲಿ ಇಂದು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಶಾಸಕರಿಗೆ 100 ಕೋಟಿ ಅನುದಾನ ನೀಡಿದ್ದಾರೆ. ಬಿಜೆಪಿ ಶಾಸಕರಿಗೆ 16 ಕ್ಷೇತ್ರಕ್ಕೆ 40 ಕೋಟಿಯಂತೆ ಕೊಟ್ಟಿದ್ದಾರೆ. ಇವತ್ತು ಆದೇಶ ಸಿಗುತ್ತಿದೆ ಎಂದು ವಿವರಿಸಿದರು. ಸಿದ್ದರಾಮಯ್ಯನವರು ಕಳೆದ ನವೆಂಬರ್‍ನಲ್ಲಿ ಇದ್ದಾಗ ಕೊಟ್ಟ 25 ಕೋಟಿಗೆ ಸಂಬಂಧಿಸಿ ಈಗ ಟೆಂಡರ್ ಆಗುತ್ತಿದೆ ಎಂದರು.
 
ಸರ್ ಸಿ.ವಿ.ರಾಮನ್ ನಗರ ವಿಧಾನಸಭಾ ಕ್ಷೇತ್ರದಲ್ಲಿ ಸುಮಾರು 700 ಕೋಟಿಯಷ್ಟು ತೆರಿಗೆಯನ್ನು ಜಿಬಿಎಗೆ ತುಂಬಿದ್ದೇವೆ. ಸರಕಾರ ಕೊಡುತ್ತಿರುವ ಅನುದಾನ ಕೇವಲ 65 ಕೋಟಿ. ಅಂದರೆ ಅದು ಶೇ 10ರಷ್ಟು. ಉಳಿದ 90 ಶೇ ಮೊತ್ತ ಸರಕಾರಕ್ಕೆ ಹೋಗುತ್ತಿದೆ ಎಂದು ದೂರಿದರು.
 
2023ರಲ್ಲಿ ಸರಕಾರ ಅಧಿಕಾರ ಸ್ವೀಕರಿಸಿದೆ. ಇದೀಗ ಅನುದಾನ ಸಿಕ್ಕಿದೆ. ಇದು ಏನೇನೂ ಸಾಲದು ಎಂದು ನುಡಿದರು. ಎಲ್ಲ ವಿಧಾನಸಭಾ ಕ್ಷೇತ್ರಕ್ಕೂ ಸಮಾನ ಅನುದಾನ ಕೊಡಿ ಎಂದು ಮುಖ್ಯಮಂತ್ರಿಗಳಿಗೆ ವಿನಂತಿಸಿದರು. ಈ ಬಾರಿ ಮಳೆ ಕಡಿಮೆ ಆಗಿರುವ ಕಾರಣ ನೀರಿನ ಅಭಾವವೂ ಬರಬಹುದು. ಸರಕಾರ ತರಾತುರಿಯಲ್ಲಿದೆ. ಜಿಬಿಎ ಚುನಾವಣೆ ನಡೆಸುವ ಏಕೈಕ ಉದ್ದೇಶದಿಂದ ಅನುದಾನ ಕೊಟ್ಟಿರುವ ಸಾಧ್ಯತೆ ಇದೆ ಎಂದು ಅವರು ಪ್ರಶ್ನೆಗೆ ಉತ್ತರಿಸಿದರು. ತಕ್ಷಣ ಜಿಬಿಎ ಚುನಾವಣೆ ನಡೆಸುವಂತೆ ಅವರು ಆಗ್ರಹಿಸಿದರು.
 

Share this Story:

Follow Webdunia kannada

ಮುಂದಿನ ಸುದ್ದಿ

ರಾಮಮಂದಿರ ದೇಣಿಗೆ ವಿಚಾರದಲ್ಲಿ ಬಂಧಿಯಾಗಿರುವ ಚಂಪತ್ ರೈ ಮೊದಲ ಪ್ರತಿಕ್ರಿಯೆ