Publish Date: Sat, 11 Jul 2020 (19:22 IST)
Updated Date: Sat, 11 Jul 2020 (19:24 IST)
ಚಿರತೆ ದಾಳಿಗೆ ಮಗುವೊಂದು ಬಲಿಯಾದ ಘಟನೆ ನಡೆದಿದೆ.
ನಾಲ್ಕು ವರ್ಷದ ಗಂಡು ಮಗು ಚಿರತೆ ದಾಳಿಗೆ ಬಲಿಯಾಗಿದೆ.
ತುಮಕೂರು ಜಿಲ್ಲೆಯ ಕುಣಿಗಲ್ ತಾಲ್ಲೂಕು ಹುಲಿಯೂರು ದುರ್ಗ ಹೋಬಳಿ ರಾಜನಹಳ್ಳಿ ಗ್ರಾಮದ ಬುಡಕಟ್ಟು ನಿವಾಸಿ ಮುನಿರಾಜು ಎಂಬುವರ ಮಗುವಿನ ಮೇಲೆ ಚಿರತೆ ದಾಳಿ ನಡೆಸಿ ಬಲಿ ಪಡೆದಿದೆ.
ಮಗುವಿನ ಹೆಸರು ಚಂದ್ರು. ಮನೆಯ ಆವರಣದಲ್ಲಿ ಆಟವಾಡುತ್ತಿದ್ದಾಗ ಚಿರತೆ ದಾಳಿ ನಡೆಸಿ ಹೊತ್ತೊಯ್ದಿದೆ. ಗ್ರಾಮಸ್ಥರು ರಕ್ಷಣೆಗೆ ಧಾವಿಸುವಷ್ಟರಲ್ಲಿ ಮಗು ಮೃತ ಪಟ್ಟಿದ್ದು, ಶವವನ್ನು ಬಿಟ್ಟು ಚಿರತೆ ಪರಾರಿಯಾಗಿದೆ.