Select Your Language

Notifications

webdunia
webdunia
webdunia
webdunia

ಆಟವಾಡುತ್ತಿದ್ದ ಮಗುವನ್ನು ಹೊತ್ತೊಯ್ದ ಚಿರತೆ

ಆಟವಾಡುತ್ತಿದ್ದ ಮಗುವನ್ನು ಹೊತ್ತೊಯ್ದ ಚಿರತೆ
ತುಮಕೂರು , ಶನಿವಾರ, 11 ಜುಲೈ 2020 (19:22 IST)
ಚಿರತೆ ದಾಳಿಗೆ ಮಗುವೊಂದು ಬಲಿಯಾದ ಘಟನೆ ನಡೆದಿದೆ.

ನಾಲ್ಕು ವರ್ಷದ ಗಂಡು ಮಗು ಚಿರತೆ ದಾಳಿಗೆ ಬಲಿಯಾಗಿದೆ.

ತುಮಕೂರು ಜಿಲ್ಲೆಯ ಕುಣಿಗಲ್ ತಾಲ್ಲೂಕು ಹುಲಿಯೂರು ದುರ್ಗ ಹೋಬಳಿ ರಾಜನಹಳ್ಳಿ ಗ್ರಾಮದ ಬುಡಕಟ್ಟು ನಿವಾಸಿ ಮುನಿರಾಜು ಎಂಬುವರ ಮಗುವಿನ ಮೇಲೆ ಚಿರತೆ ದಾಳಿ ನಡೆಸಿ ಬಲಿ ಪಡೆದಿದೆ.

ಮಗುವಿನ ಹೆಸರು ಚಂದ್ರು. ಮನೆಯ ಆವರಣದಲ್ಲಿ ಆಟವಾಡುತ್ತಿದ್ದಾಗ ಚಿರತೆ ದಾಳಿ ನಡೆಸಿ ಹೊತ್ತೊಯ್ದಿದೆ. ಗ್ರಾಮಸ್ಥರು ರಕ್ಷಣೆಗೆ ಧಾವಿಸುವಷ್ಟರಲ್ಲಿ ಮಗು ಮೃತ ಪಟ್ಟಿದ್ದು, ಶವವನ್ನು ಬಿಟ್ಟು ಚಿರತೆ ಪರಾರಿಯಾಗಿದೆ.



Share this Story:

Follow Webdunia kannada

ಮುಂದಿನ ಸುದ್ದಿ

ಮೈಸೂರು ಜಿಲ್ಲೆಯಲ್ಲಿ ಮತ್ತೆ ಲಾಕ್ ಡೌನ್ ಎಂದ ಜಿಲ್ಲಾಧಿಕಾರಿ