Select Your Language

Notifications

webdunia
webdunia
webdunia
webdunia

‘ಗೂಂಡಾ ಕಾಯ್ದೆಯಡಿ ಶಾಸಕ ಜಮೀರ್ ಅಹ್ಮದ್ ಬಂಧನ’

‘ಗೂಂಡಾ ಕಾಯ್ದೆಯಡಿ ಶಾಸಕ ಜಮೀರ್ ಅಹ್ಮದ್ ಬಂಧನ’
ಮಂಗಳೂರು , ಮಂಗಳವಾರ, 21 ಏಪ್ರಿಲ್ 2020 (18:23 IST)
ಪಾದರಾಯನಪುರದಲ್ಲಿ ಕೊರೊನಾ ವಾರಿಯರ್ಸ್, ಪೊಲೀಸರ ಮೇಲೆ ನಡೆದ ಹಲ್ಲೆ ಘಟನೆ ಕುರಿತಂತೆ ಗೂಂಡಾ ಕಾಯ್ದೆಯಡಿ ಶಾಸಕ ಜಮೀರ್ ಅಹ್ಮದ್ ರನ್ನು ಬಂಧನ ಮಾಡಬೇಕು.

ಹೀಗಂತ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ರಾಜ್ಯ ಸರಕಾರವನ್ನು ಒತ್ತಾಯ ಮಾಡಿದ್ದಾರೆ.

ಗಲಭೆ ಕುರಿತಂತೆ ಆರೋಪಿಗಳ ಪರವಾಗಿ ನಿಂತಂತೆ ಜಮೀರ್ ಅಹ್ಮದ್ ಮಾತನಾಡುವುದು ಸರಿಯಲ್ಲ. ಪಾದರಾಯನಪುರ ಕೇಸ್ ನಲ್ಲಿ ಅಲ್ಲಿನ ಗಲಭೆ, ಗುಂಡಾಗಿರಿಗೆ ಜನಪ್ರತಿನಿಧಿಯೇ ಬೆನ್ನಿಗೆ ನಿಂತಿರುವುದು ಕಾನೂನು ವಿರುದ್ಧವಾದದ್ದು ಎಂದು ಟೀಕೆ ಮಾಡಿದ್ದಾರೆ.
 
webdunia

ಸರ್ವಾಧಿಕಾರಿಯಂತೆ ಜಮೀರ್ ವರ್ತನೆ ಮಾಡ್ತಿದ್ದಾರೆ. ಪರ್ಮಿಷನ್ ತೆಗೆದುಕೊಂಡು ಅಧಿಕಾರಿಗಳು ಬರಬೇಕು ಅಂತೇನು ನಿಯಮ ಇಲ್ಲ. ಗುಂಡಾ ಕಾಯ್ದೆಯಡಿ ಜಮೀರ್ ಅಹ್ಮದ್ ರನ್ನು ಬಂಧನ ಮಾಡಬೇಕೆಂದು ಸಿಎಂ ಹಾಗೂ ಸರಕಾರಕ್ಕೆ ಒತ್ತಾಯ ಮಾಡೋದಾಗಿ ಕಟೀಲ್ ಹೇಳಿದ್ದಾರೆ.



Share this Story:

Follow Webdunia kannada

ಮುಂದಿನ ಸುದ್ದಿ

ಸರಕಾರಿ ಆ್ಯಂಬುಲೆನ್ಸ್ ನಲ್ಲಿ ಅಕ್ರಮ ಮದ್ಯ ಸಾಗಾಟ