Publish Date: Mon, 27 Nov 2023 (18:22 IST)
Updated Date: Mon, 27 Nov 2023 (18:39 IST)
ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಅವರನ್ನು ಭಾನುವಾರ ಬೆಂಗಳೂರು ಹೊರವಲಯ ಬಿಡದಿಯಲ್ಲಿರುವ ತೋಟದ ಮನೆಯಲ್ಲಿ ಮಾಜಿ ಸಿಎಂ ಕುಮಾರಸ್ವಾಮಿ ಭೇಟಿ ಮಾಡಿದ್ದಾರೆ.. ಬಳಿಕ ಮಾತನಾಡಿದ ಮಾಜಿ ಸಿಎಂ ಕುಮಾರಸ್ವಾಮಿ, ಆಗ ನಮ್ಮ ಕಾಂಬಿನೇಷನ್ ಚೆನ್ನಾಗಿ ಕೆಲಸ ಮಾಡಿತ್ತು.
ನಾವು ಅಡಿಪಾಯ ಹಾಕಿದ್ದೇವೆ ಮತ್ತು ಈಗ ಆ ಮ್ಯಾಜಿಕ್ ಅನ್ನು ಮರಳಿ ತರುವುದು ನಿಖಿಲ್ ಮತ್ತು ವಿಜಯೇಂದ್ರ ಇಬ್ಬರದ್ದೂ ಆಗಿದೆ. ನಿಖಿಲ್-BYV ಸಹೋದರರಂತೆ ಓಡಾಡಲಿದ್ದಾರೆ ಎಂದರು. ಮುಂದಿನ ವರ್ಷ ಎಲ್ಲಾ 28 ಲೋಕಸಭಾ ಸ್ಥಾನಗಳನ್ನು ಮೈತ್ರಿ ಪಕ್ಷ ಗೆಲ್ಲಲು ವಿಜಯೇಂದ್ರ ಅವರು ತಮ್ಮ ಪಕ್ಷದ ಕಾರ್ಯಕರ್ತರನ್ನು ತಳಮಟ್ಟದಲ್ಲಿ ಸಂಘಟಿಸಲು ಸಾಕಷ್ಟು ಪ್ರಯತ್ನಗಳನ್ನು ಮಾಡುತ್ತಿದ್ದಾರೆ ಎಂದು ಅವರು ತಿಳಿಸಿದ್ರು