Publish Date: Sun, 26 Nov 2023 (17:22 IST)
Updated Date: Sun, 26 Nov 2023 (17:15 IST)
ಮತ್ತೆ ಬಿಜೆಪಿಗೆ ಹೋಗುವ ಮಾತೇ ಇಲ್ಲ.. ನಾನು ನನ್ನ ಪಕ್ಷವನ್ನ ರಾಜ್ಯದಲ್ಲಿ ಬಲಿಷ್ಠ ಮಾಡುವೆ ಎಂದು ಶಾಸಕ, ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ಸ್ಥಾಪಕ ಜನಾರ್ದನ ರೆಡ್ಡಿ ತಿಳಿಸಿದ್ದಾರೆ.. ಈ ಕುರಿತು ಬೆಂಗಳೂರಲ್ಲಿ ಮಾತನಾಡಿದ ಅವರು, ಯಾವುದೇ ಪಕ್ಷದ ಜೊತೆ ಹೊಂದಾಣಿಕೆ ಅಸಾಧ್ಯ.. ಜೊತೆಗೆ ಡಿಸಿಎಂ ಡಿಕೆಶಿಯನ್ನ ರಕ್ಷಣೆ ಮಾಡಲು ಸಿಎಂ ಸಿದ್ದರಾಮಯ್ಯ ಕೇಸ್ ವಾಪಸ್ ಪಡೆದಿದ್ದಾರೆ ಎಂದು ಆರೋಪಿಸಿದ್ರು.