Webdunia - Bharat's app for daily news and videos

Install App

ಕುಮಾರಸ್ವಾಮಿಗೆ ಸಿಎಂ ಆಗೋದು ಹೇಗೆಂದು ಚೆನ್ನಾಗಿ ಗೊತ್ತು ಎಂದವರಾರು?

Webdunia
ಮಂಗಳವಾರ, 31 ಜುಲೈ 2018 (14:05 IST)
ಹೆಚ್. ಡಿ. ಕುಮಾರಸ್ವಾಮಿಗೆ ಸಿಎಂ ಆಗೋದು ಹೇಗೆಂದು ಚೆನ್ನಾಗಿ ಗೊತ್ತು. 40 ಸೀಟಿದ್ದಾಗ ಹೇಗೆ?38 ಇದ್ದಾಗ ಹೇಗೆ ಎಂದು ಚೆನ್ನಾಗಿ ಮ್ಯಾನೇಜ್ ಮಾಡಿದ್ರು ಎಂದು ಮಾಜಿ ಸಚಿವ ಹಾಗೂ ಹಾಲಿ ಶಾಸಕ ಹೇಳಿಕೆ ನೀಡಿದ್ದಾರೆ.  

ಹಾಸನದಲ್ಲಿ ಮಾಜಿ ಸಚಿವ ಹಾಗೂ ಶಾಸಕ ವಿ.ಸೋಮಣ್ಣ  ಈ ಹೇಳಿಕೆ ನೀಡಿದ್ದಾರೆ. ಕರ್ನಾಟಕ ಏಕೀಕರಣ ಆಗಿ ಬಹಳ ವರ್ಷಗಳಾಯ್ತು. ಕರ್ನಾಟಕ ಬೇರ್ಪಡಿಸೊ‌ ಕೂಗಿಗೆ ನಮ್ಮ ಸಹಮತ ಇಲ್ಲ, ಅದರ ಅಗತ್ಯವು ಇಲ್ಲ. ಶ್ರೀ ರಾಮುಲು ಮತ್ತು ಇತರರ ಹೇಳಿಕೆಗೆ ಮಹತ್ವವಿಲ್ಲ. ಮುಖ್ಯಮಂತ್ರಿಗಳು ಏಕೆ ಇದನ್ನು ದೊಡ್ಡದು ಮಾಡುತ್ತಿದ್ದಾರೋ ಗೊತ್ತಿಲ್ಲ.

ಅವರು ರಾಜ್ಯದ ಎಲ್ಲರಿಗೂ ಮುಖ್ಯಮಂತ್ರಿ, ಅವರು ಉದ್ವೇಗಕ್ಕೆ ಒಳಗಾಗಬಾರದು. ಜವಾಬ್ದಾರಿಯುತ ಸ್ಥಾನದಲ್ಲಿರೋರು ಈ ರೀತಿ ಹೇಳಿಕೆ ನೀಡೋದು ಸರಿಯಲ್ಲ ಎಂದು ಸಿಎಂ‌ ಕುಮಾರಸ್ವಾಮಿಗೆ ಮಾಜಿ ಸಚಿವ ವಿ.ಸೋಮಣ್ಣ ಟಾಂಗ್ ನೀಡಿದ್ದಾರೆ.
ಕುಮಾರಸ್ವಾಮಿ ಸಿಎಂ ಆದ ಬಳಿಕ ಬಹುಶಃ ನಿದ್ದೆ ಮಾಡ್ತಿಲ್ಲ ಎಂದು ಕಾಣುತ್ತದೆ ಎಂದಿರುವ ಅವರು, ಕುಮಾರಸ್ವಾಮಿ ಕನವರಿಕೆಯಲ್ಲಿದ್ದಾರೊ ಏನೊ ಗೊತ್ತಿಲ್ಲ ಎಂದಿದ್ದಾರೆ. ದಯಮಾಡಿ ಅವರು ದಿನಕ್ಕೆ ಐದಾರು ಗಂಟೆ ನಿದ್ದೆ ಮಾಡಲಿ ಎಂದು ಸೋಮಣ್ಣ ಕಾಳೆಲೆದಿದ್ದಾರೆ.


ಸಂಬಂಧಿಸಿದ ಸುದ್ದಿ

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments