Select Your Language

Notifications

webdunia
webdunia
webdunia
webdunia

ಯಾವ ಸಿಎಂ ಕೂಡಾ ಕುಮಾರಸ್ವಾಮಿ ರೀತಿ ಹೇಳಿಕೆ ನೀಡಿರಲಿಲ್ಲ: ಬಿಎಸ್ ವೈ ಟೀಕೆ

ಯಾವ ಸಿಎಂ ಕೂಡಾ ಕುಮಾರಸ್ವಾಮಿ ರೀತಿ ಹೇಳಿಕೆ ನೀಡಿರಲಿಲ್ಲ: ಬಿಎಸ್ ವೈ ಟೀಕೆ
ಹುಬ್ಬಳ್ಳಿ , ಮಂಗಳವಾರ, 31 ಜುಲೈ 2018 (10:26 IST)
ಹುಬ್ಬಳ್ಳಿ: ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯಕ್ಕಾಗಿ ನಡೆಯುತ್ತಿರುವ ಹೋರಾಟದ ಬಗ್ಗೆ ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದಾರೆ.
 

ಯಾವ ಸಿಎಂ ಕೂಡಾ ಎಚ್ ಡಿಕೆ ರೀತಿ ಉತ್ತರ ಕರ್ನಾಟಕ, ದ.ಕರ್ನಾಟಕ ಎಂದು ಪ್ರತ್ಯೇಕ ಮಾಡಿ ಹೇಳಿಕೆ ನೀಡಿರಲಿಲ್ಲ. ಅಖಂಡ ಕರ್ನಾಟಕ ನಿರ್ಮಾಣವಾದ ಬಳಿಕ ಇಂತಹದ್ದೊಂದು ಹೇಳಿಕೆ ನೀಡಿದ ಮೊದಲ ಸಿಎಂ ಎಂದು ಕುಮಾರಸ್ವಾಮಿ ವಿರುದ್ಧ ಬಿಎಸ್ ವೈ ವಾಗ್ದಾಳಿ ನಡೆಸಿದ್ದಾರೆ.

ಇನ್ನು ಮಾಜಿ ಸಿಎಂ ಸಿದ್ದರಾಮಯ್ಯ ತಮ್ಮ ಕಾಲಾವಧಿಯಲ್ಲಿ ನೀರಾವರಿ ಯೋಜನೆಗಳಿಗೆ ಹಣ ಕೊಡದೇ ಉತ್ತರ ಕರ್ನಾಟಕಕ್ಕೆ ಅನ್ಯಾಯವೆಸಗಿದರು. ಇವರು ಈ ರೀತಿ ತಾರತಮ್ಯ ಮಾಡುತ್ತಿದ್ದಾರೆ. ಆದರೆ ಉತ್ತರ ಕರ್ನಾಟಕಕ್ಕೆ ಬೇಕಾಗಿರುವುದು ಅಭಿವೃದ್ಧಿಯೇ ಹೊರತು, ಪ್ರತ್ಯೇಕ ರಾಜ್ಯವಲ್ಲ. ಈ ಬಗ್ಗೆ ಪ್ರತ್ಯೇಕ ರಾಜ್ಯಕ್ಕಾಗಿ ಹೋರಾಟಕ್ಕೆ ಮುಂದಾಗಿರುವ ಸ್ವಾಮೀಜಿಗಳಿಗೂ ಮನದಟ್ಟು ಮಾಡುವುದಾಗಿ ಬಿಎಸ್ ಯಡಿಯೂರಪ್ಪ ಹೇಳಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.      

Share this Story:

Follow Webdunia kannada

ಮುಂದಿನ ಸುದ್ದಿ

ಶೀರೂರು ಸ್ವಾಮೀಜಿಗಳ ಮರಣೋತ್ತರ ಪರೀಕ್ಷೆ ವರದಿ ಬಂತು! ಆದರೆ...!!