Webdunia - Bharat's app for daily news and videos

Install App

ಈ ದಿನದಿಂದ ಕೆಎಸ್ ಆರ್ ಟಿಸಿ, ಬಿಎಂಟಿಸಿ ಸೇರಿದಂತೆ ಎಲ್ಲಾ ಸಾರಿಗೆಗಳ ಮುಷ್ಕರ

Krishnaveni K
ಗುರುವಾರ, 19 ಡಿಸೆಂಬರ್ 2024 (10:06 IST)
ಬೆಂಗಳೂರು: ವಿವಿಧ ಬೇಡಿಕೆಗಳನ್ನು ಮುಂದಿಟ್ಟುಕೊಂಡಿದ್ದು ಕೆಎಸ್ ಆರ್ ಟಿಸಿ, ಬಿಎಂಟಿಸಿ ಸೇರಿದಂತೆ ಎಲ್ಲಾ ಸಾರಿಗೆ ನಿಗಮಗಳೂ ಅನಿರ್ದಿಷ್ಟಾವಧಿ ಮುಷ್ಕರ ನಡೆಸಲು ತೀರ್ಮಾನಿಸಿವೆ.

ಡಿಸೆಂಬರ್ 31 ರಿಂದ ಮುಷ್ಕರ ನಡೆಸಲು ಆರು ಸಾರಿಗೆ ಸಂಘಟನೆಗಳು ತೀರ್ಮಾನಿಸಿದ್ದು, ಈಗಿನಿಂದಲೇ ಮುಷ್ಕರ ಯಶಸ್ವಿಗೊಳಿಸಲು ಕೆಲಸ ಶುರು ಮಾಡಿವೆ. ಹೀಗಾಗಿ ಕೆಎಸ್ ಆರ್ ಟಿಸಿ, ಬಿಎಂಟಿಸಿ ಸೇರಿದಂತೆ ನಾಲ್ಕೂ ನಿಗಮಗಳ ನೌಕರರು ಬಸ್ ಮುಷ್ಕರದಲ್ಲಿ ಭಾಗಿಯಾಗಲಿದ್ದಾರೆ.

ಮೆಜೆಸ್ಟಿಕ್, ಬನಶಂಕರಿ ಬಸ್ ಡಿಪೊಗಳಲ್ಲಿ ಮುಷ್ಕರವಿದೆ ಎಂಬ ಕರಪತ್ರವನ್ನು ಹಂಚಲಾಗಿದೆ. ಜನವರಿ 1 ರಿಂದ ಬಸ್ ಇರುವುದಿಲ್ಲ ಸಹಕರಿಸಿ ಎಂದು ಕರಪತ್ರ ಹಂಚಲಾಗಿದೆ. ಡ್ರೈವರ್, ಕಂಡಕ್ಟರ್, ಮೆಕಾನಿಕ್ ಗಳಿಗೆ ಕರಪತ್ರ ನೀಡಲಾಗಿದೆ.

ಶಕ್ತಿ ಯೋಜನೆಯ ಬಾಕಿಯೇ 2,000 ಕೋಟಿ ರೂ.ಗಳಷ್ಟು ಬಾಕಿಯಿದೆ ಎನ್ನಲಾಗಿದೆ. ಇದೆಲ್ಲವನ್ನೂ ಬಿಡುಗಡೆ ಮಾಡಬೇಕು. ಈಗಾಗಲೇ ಸರ್ಕಾರಕ್ಕೂ ಮುಷ್ಕರದ ಬಗ್ಗೆ ಮಾಹಿತಿ ನೀಡಲಾಗಿದೆ. ಆದರೆ ಇದುವರೆಗೆ ಮಾತುಕತೆಗೆ ಅಹ್ವಾನ ನೀಡಿಲ್ಲ. ಹೀಗಾಗಿ ಮುಷ್ಕರದ ನಿರ್ಧಾರದಲ್ಲಿ ಬದಲಾವಣೆಯಿಲ್ಲ.ಕಳೆದ 38 ತಿಂಗಳಿನಿಂದ ಅರಿಯರ್ಸ್ ನೀಡಿಲ್ಲ. ಸಂಬಳ ಹೆಚ್ಚು ಮಾಡಿಲ್ಲ ಎಂಬಿತ್ಯಾದಿ ಬೇಡಿಕೆಗಳನ್ನು ಇಟ್ಟುಕೊಂಡು ಮುಷ್ಕರ ನಡೆಸಲಾಗುತ್ತಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಹಸಿವು ಎಂದು ಹೇಳಿದ ಮಗುವನ್ನು ಕೊಂದ ತಾಯಿಗೆ ಜಾಮೀನು, ಕೋರ್ಟ್‌ ಅಭಿಪ್ರಾಯವೇನು ಗೊತ್ತಾ

ಗಣಪತಿ ಚತುರ್ಥಿಗೆ ದಿನಗಣನೆ, ಪಿಒಪಿ ಮೂರ್ತಿಗಳ ವಿರುದ್ಧ ಕಠಿಣ ಕ್ರಮಕ್ಕೆ ಸರ್ಕಾರ ಸೂಚನೆ

ತೆಹಲ್ಕಾ'ದ ಮಾಜಿ ಪ್ರಧಾನ ಸಂಪಾದಕ ತರುಣ್ ತೇಜ್‌ಪಾಲ್ ಶಿಕ್ಷೆಯಾದ ಪ್ರಕರಣ ಹಿನ್ನೆಲೆ ಇಲ್ಲಿದೆ

Video, ವಾಲಿಬಾಲ್ ಆಡುತ್ತಿರುವಾಗಲೇ ಹೃದಯಾಘಾತ, ಎಸ್ಸೆಸ್ಸೆಲ್ಸಿ ಬಾಲಕ‌ ಸ್ಥಳದಲ್ಲೇ ಸಾವು,

ಗಮನ‌ ಸೆಳೆದ ಬನ್ನೇರುಘಟ್ಟದ ಮರಿ‌ ಹಿಪ್ಪೋಗೆ ನಿಮ್ಮ‌ಇಚ್ಛೆಯ ಹೆಸರಿಡಬಹುದು, ಹಾಗಾದರೆ ನೀವೇನು‌ ಮಾಡಬೇಕು‌ ಗೊತ್ತಾ

ಮುಂದಿನ ಸುದ್ದಿ
Show comments