Select Your Language

Notifications

webdunia
webdunia
webdunia
webdunia

ಸಿಎಂ ಬಿಎಸ್ ವೈ ಸಿಡಿ ರಮೇಶ್ ಜಾರಕಿಹೊಳಿ ಬಳಿ ಇದೆ ಎಂದು ಕೆಪಿಸಿಸಿ ವಕ್ತಾರ

ಸಿಎಂ ಬಿಎಸ್ ವೈ ಸಿಡಿ ರಮೇಶ್ ಜಾರಕಿಹೊಳಿ ಬಳಿ ಇದೆ ಎಂದು ಕೆಪಿಸಿಸಿ ವಕ್ತಾರ
ಬೆಂಗಳೂರು , ಭಾನುವಾರ, 28 ಮಾರ್ಚ್ 2021 (12:39 IST)
ಬೆಂಗಳೂರು :ಮಾಜಿ ಸಚಿವ ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣ ಸಿಎಂ ಬಿಎಸ್ ಯಡಿಯೂರಪ್ಪ ಭೂಗತ ಆಗಿದ್ದಾರೆ. ಸಿಎಂ ಬಿಎಸ್ ವೈ ಸಿಡಿ ರಮೇಶ್ ಜಾರಕಿಹೊಳಿ ಬಳಿ ಇದೆ ಎಂದು ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್ ಆರೋಪ ಮಾಡಿದ್ದಾರೆ.

ಮೈಸೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು,  ಬಿಎಲ್ ಸಂತೋಷ್ ಅವ್ರೇ ಎಲ್ಲಿದ್ದೀರಾ? ನಿಮ್ಮ ಟ್ವೀಟ್ ಎಲ್ಲಿ? ಜೀವಬೆದರಿಕೆ ಇದೆ ಎಂದು ಯುವತಿ ದೂರು ಕೊಟ್ಟಿದ್ದಾಳೆ. ತನ್ನನ್ನು ಲೈಂಗಿಕವಾಗಿ ಬಳಸಿಕೊಂಡಿದ್ದಾರೆಂದು ಹೇಳಿದ್ದಾರೆ. ಆದರೂ 376(ಸಿ) ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲು. ಐಪಿಎಸ್ ಅಧಿಕಾರಿಗಳು ಹಾಕಿರುವ ಕೇಸ್ ಗೆ ಬೆಲೆ ಕಟ್ಟಬೇಕಾಗುತ್ತೆ. ಈವರೆಗೂ ಏಕೆ ಶಾಸಕ ರಮೇಶ್ ಜಾರಕಿಹೊಳಿ ಬಂಧಿಸಿಲ್ಲ. ಎಂದು  ಪ್ರಶ್ನಿಸಿದ್ದಾರೆ.

ಆ ಕೆಲಸ ಮಾಡುವಾಗ ಜಾತಿ ನೆನಪಾಗಿಲ್ಲ. ಈಗ ಆಯ್ತಾ? ನೀವು ಮಾಡಿರುವ ಕೆಲಸ ಮುಚ್ಚಿಕೊಳ‍್ಳಲು ಜಾತಿ ತರ್ತಿದ್ದೀರಾ?ಜಾತಿ ಬಗ್ಗೆ ಪೋಷಕರಿಂದ ಹೇಳಿಸ್ತಿರಿ ನಾಚಿಕೆ ಆಗೋಲ್ವಾ?ಜಾತಿ ಬಳಸಿಕೊಂಡು ಸಮಾಜದಲ್ಲಿ ಶಾಂತಿಭಂಗ ಮಾಡ್ತಿದ್ದಾರಾ? ಸರ್ಕಾರ ಇಂಥ ಬಹಿರಂಗ ಹೇಳಿಕೆಗಳನ್ನು ಏಕೆ ಸಹಿಸಿಕೊಳ್ತಿದೆ. ಸಿಎಂ ಅವರೇ ನಿಮ್ಮ ಸಿಡಿ ಇದ್ರೂ ಪರವಾಗಿಲ್ಲ ಕ್ರಮಕೈಗೊಳ್ಳಿ. ಸಿಎಂ ಬಿಎಸ್ ವೈ ಬೆಂಬಲಕ್ಕೆ ನಾವು ನಿಲ್ಲುತ್ತೇವೆ. ರಾಜ್ಯದ ಜನ ನಿಮ್ಮ ಜೊತೆ ಇರ್ತಾರೆ ರಮೇಶರನ್ನು ಬಂಧಿಸಿ ಎಂದು ಆಗ್ರಹಿಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ ಡಿಕೆ ಸುರೇಶ್