ಕೋಲಾರದ ವಿದ್ಯುತ್ ಪವರ್ ಸ್ಟೇಷನ್ ನಲ್ಲಿ ಅಗ್ನಿ ಅವಘಡ

Webdunia
ಭಾನುವಾರ, 4 ಜುಲೈ 2021 (14:05 IST)
ಕೋಲಾರದ ವಿದ್ಯುತ್ 220 ಕೆವಿ ಸ್ವೀಕರಣ ಕೇಂದ್ರ ಪವರ್ ಸಬ್ ಸ್ಟೇಷನ್ ನಲ್ಲಿ ಅಗ್ನಿ ಅವಘಡ ಸಂಭವಿಸಿದೆ.
110 ಎಂ.ಎಂ.ಇ ಟ್ರಾನ್ಸ್ ಫಾರಂ ಇಡೀ ಜಿಲ್ಲೆಗೆ ಎರಡು ಇದ್ದು ಅದರಲ್ಲಿ ಒಂದರಲ್ಲಿ ವೈರಿಂಗ್ ಸಮಸ್ಯೆಯಿಂದ ಸಣ್ಣಮಟ್ಟದ ಬೆಂಕಿ ಕಾಣಿಸಿಕೊಂಡಿದ್ದು, ಬೆಸ್ಕಾಂ ಸಿಬ್ಬಂದಿಗಳು ಬೆಂಕಿ ನಂದಿಸಿದ್ದಾರೆ. 
ಟ್ರಾನ್ಸ್ ಫಾರಂ ನಲ್ಲಿ ಆಯಿಲ್ ಸೋರಿಕೆಯಾದ್ದರಿಂದ ಬೆಂಕಿ ಹೊತ್ತಿ ಹುರಿದಿದ್ದು ತಕ್ಷಣ ಅಗ್ನಿಶಾಮಕ ದಳಸ ಸಿಬ್ಬಂದಿ ಸ್ಥಳಕ್ಕಾಗಮಿಸಿ 1 ಗಂಟೆಗಳ ಕಾಲ ಬೆಂಕಿ ನಂದಿಸಲು ಹರಸಾಹಸ ಪಟ್ಟು ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಬೆಂಕಿ ಅವಘಢದಿಂದ ದಟ್ಟ ಹೊಗೆ ಕಾಣಿಸಿಕೊಂಡಿದ್ದು ಮುಗಿಲೆತ್ತರಕ್ಕೆ ಬೆಂಕಿ ಕೆನ್ನಾಲಿಗೆ ಹೊತ್ತಿಹುರಿದಿದ್ದರಿಂದ ಕೆಲವು ಕಾಲ ಕೋಲಾರ ಜನರಲ್ಲಿ ಆಂತಕ ಮನೆ ಮಾಡಿತ್ತು, ಬೆಂಕಿಯ ಕೆನ್ನಾಲಿಗೆ 100 ಎಂ.ಎಂ.ಇ ಒಂದು ಟ್ರಾನ್ಸ್ ಫಾರಂ ಸಂಪೂರ್ಣ ಸುಟ್ಟು ಭಸ್ಮವಾಗಿದ್ದು, ಕೋಲಾರ ನಗರದ ಸೇರಿದಂತೆ ಕೆಲವು ಗ್ರಾಮೀಣ ಬಾಗಗಳಲ್ಲಿ ವಿದ್ಯುತ್ ಸಂಪರ್ಕ ಕಡಿತಗೊಂಡಿದೆ.
ಸ್ಥಳಕ್ಕೆ ನಗರ ಠಾಣೆ ಪೋಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದರಲ್ಲದೆ ಅಗ್ನಿ ಅವಘಢ ನೋಡಲು ಜನರು ತಾ ಮುಂದು ತಾ ಮುಂದು ಎಂದು ಮುಂದಾಗಿದರು. ಟ್ರಾನ್ಸ್ ಫರಂ ಸಿಡಿದು ಮತ್ತಷ್ಟು ಅನಾಹುತ ಸಂಬಂವಿಸಬಹುದೆಂದು ಜನರನ್ನು ಕಂಟ್ರೋಲ್ ಮಾಡಲು ಹರಸಾಹಸ ಪಟ್ಟರು. 
ಅಗ್ನಿ ಅವಗಡದಿಂದ ಟ್ರಾನ್ಸ್ ಫಾರಂ ಸುಟ್ಟು ಭಸ್ಮವಾಗಿರೋದ್ರಿಂದ ಸರಿಪಡಿಸಲು ಒಂದಷ್ಟು ಕಾಲ ಸಮಯ ತೆಗೆದುಕೊಳ್ಳುವುದರಿಂದ ಕೆಲವು ಕಡೆ ಕತ್ತಲಲ್ಲೆ ಕಾಲ ಕಳೆಯಬೇಕಾಗಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಶಬರಿಮಲೆ ಸುತ್ತಲಿನ ವಿವಾದ ಭಕ್ತರಿಗೆ ಯಾವುದೇ ಪರಿಣಾಮ ಬೀರಿಲ್ಲ: ಟಿಡಿಬಿ

ಪಾಕ್‌ನ ಮೂಲೆ ಮೂಲೆಗೂ ನುಗ್ಗುವ ಸಾಮರ್ಥ್ಯ ಭಾರತದ ಬ್ರಹ್ಮೋಸ್ ಕ್ಷಿಪಣಿಗಿದೆ: ರಾಜನಾಥ ಸಿಂಗ್

ಆರ್ ಎಸ್ಎಸ್ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಕ್ಕೆ ಸಸ್ಪೆಂಡ್: ಅಧಿಕಾರಿ ಬಗ್ಗೆ ತೇಜಸ್ವಿ ಸೂರ್ಯ ಬಿಗ್ ನಿರ್ಧಾರ

ನೊಬೆಲ್ ಪ್ರಶಸ್ತಿ ವಿಜೇತ ಚೀನಾದ ಶತಾಯುಷಿ ಚೆನ್ ನಿಂಗ್ ಯಾಂಗ್ ಇನ್ನಿಲ್ಲ

ಮತಕ್ಕಾಗಿ ಮುಸ್ಲಿಮರನ್ನು ನಿಂದಿಸುವ ಬಿಜೆಪಿ ನಾಯಕರಿಗೆ ಮುಸ್ಲಿಂ ಅಳಿಯನಿದ್ದಾನೆ: ಭೂಪೇಶ್‌ ಬಾಘೇಲ್‌

ಮುಂದಿನ ಸುದ್ದಿ
Show comments